News Technology

ಪ್ರಯಾಣಿಕರ ಸುರಕ್ಷತೆಗೆ ಪ್ರಶ್ನೆ: ಫಿಟ್‌ನೆಸ್‌ ಇಲ್ಲದ ಎಂಜಿನ್‌ನಿಂದ ಹಾಸನ–ಸೋಲಾಪುರ ಎಕ್ಸ್‌ಪ್ರೆಸ್‌ ಮಾರ್ಗಮಧ್ಯೆ ಸ್ಥಗಿತ

ಬೆಂಗಳೂರು, ಆ. 18: ಪ್ರಯಾಣಿಕರ ಸಂಚಾರಕ್ಕೆ ಯೋಗ್ಯವಲ್ಲ ಎಂದು ನಮೂದಿಸಲಾಗಿದ್ದ ಎಂಜಿನ್‌ವೊಂದನ್ನು ಹಾಸನ–ಸೋಲಾಪುರ ದೈನಂದಿನ ಎಕ್ಸ್‌ಪ್ರೆಸ್‌ ರೈಲಿಗೆ ಅಳವಡಿಸಿದ ಪರಿಣಾಮ, ರೈಲು ಮಾರ್ಗಮಧ್ಯೆಯೇ ಕೆಟ್ಟು ನಿಂತು ಪ್ರಯಾಣಿಕರು ಸುಮಾರು ನಾಲ್ಕು ಗಂಟೆಗಳ ಕಾಲ ಪರದಾಡಿದ ಘಟನೆ ರವಿವಾರ ನಡೆದಿದೆ. ಹಾಸನದಿಂದ ರವಿವಾರ ಸಂಜೆ 4:15ಕ್ಕೆ ಹೊರಟ ರೈಲು ಸಂಜೆ 5:23ಕ್ಕೆ ಯಡಿಯೂರು ನಿಲ್ದಾಣ ತಲುಪಬೇಕಿತ್ತು. ಆದರೆ ಯಡಿಯೂರಿನಿಂದ ಸುಮಾರು ಮೂರು ಕಿ.ಮೀ. ಹಿಂದೆಯೇ ಎಂಜಿನ್‌ ಕೆಟ್ಟು ರೈಲು ನಿಂತಿದೆ. ಲೋಕೊಪೈಲಟ್‌ ಹಾಗೂ ರೈಲ್ವೆ ಸಿಬ್ಬಂದಿ ದುರಸ್ತಿ ಕಾರ್ಯ […]

News Sports

74% ಎಸೆತಗಳಲ್ಲಿ ಭರ್ಜರಿ ಟರ್ನ್: ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಮಿಂಚಿದ ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್

ನವದೆಹಲಿ, ಆಗಸ್ಟ್ 18: ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್‌ನಲ್ಲಿ ಭಾರತದ ಯುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ತಮ್ಮ ಅದ್ಭುತ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಕೇವಲ 24 ವರ್ಷದ ಸುತಾರ್, ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನಲ್ಲಿ 21.4 ಓವರ್‌ಗಳಲ್ಲಿ 76 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿ ಭಾರತದ ಬೌಲಿಂಗ್ ದಾಳಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಸುತಾರ್ ಅವರ ಬೌಲಿಂಗ್‌ನ ವಿಶೇಷತೆ ಎಂದರೆ ಚೆಂಡನ್ನು ತಿರುಗಿಸುವ ಸಾಮರ್ಥ್ಯ. ಅವರು ಎಸೆದ ಬರೋಬ್ಬರಿ 74 ಪ್ರತಿಶತ ಎಸೆತಗಳು 4.5 […]

GULF News

ಹಾರ್ಮುಝ್ ಜಲಸಂಧಿ ಪ್ರವೇಶದ ಮೂಲಕ ಸಾಗುವ ಹಡಗುಗಳಲ್ಲಿ ಕೆಲಸ ಮಾಡಲು 16 ಭಾರತೀಯ ನಾವಿಕರ ನಕಾರ: ಜೀವದ ಹಂಗು ತೊರೆದು ಸಾಗಲು ಒತ್ತಡ ಆರೋಪ

ಹೊಸದಿಲ್ಲಿ, ಆ.18: ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅಪಾಯಕಾರಿ ವಲಯವಾಗಿ ಗುರುತಿಸಲ್ಪಟ್ಟಿರುವ ಹಾರ್ಮುಝ್ ಜಲಸಂಧಿ ಮೂಲಕ ಸಾಗಲು 16 ಭಾರತೀಯ ನಾವಿಕರು ನಿರಾಕರಿಸಿದ್ದು, ತಮ್ಮ ಜೀವಕ್ಕೆ ಅಪಾಯವಿದೆ ಎಂದು ತುರ್ತು ನೆರವಿಗಾಗಿ ಮನವಿ ಮಾಡಿದ್ದಾರೆ. ಮಾರ್ಷಲ್ ದ್ವೀಪದ ಧ್ವಜ ಹೊಂದಿರುವ ‘ಎಎಂ ಪಯೋನಿಯರ್’ ಹಡಗಿನ ಮಾಲಕರು ಹಾಗೂ ವ್ಯವಸ್ಥಾಪಕರು ಸಿಬ್ಬಂದಿಯನ್ನು ಹಾರ್ಮುಝ್ ಮೂಲಕ ಸಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (ಎಫ್‌ಎಸ್‌ಯುಐ) ಆರೋಪಿಸಿದೆ. ಎಫ್‌ಎಸ್‌ಯುಐ ಪ್ರಕಾರ, ಹಾರ್ಮುಝ್ ಪ್ರದೇಶದಲ್ಲಿನ ಸಂಘರ್ಷದಿಂದ ಉಂಟಾಗಿರುವ ಅಪಾಯದ ಹಿನ್ನೆಲೆಯಲ್ಲಿ […]

Business News

ಸತತ ಎರಡನೇ ವಾರವೂ ಏರುತ್ತಿರುವ ಚಿನ್ನದ ಬೆಲೆ ; ಇಂದಿನ ಬೆಲೆ ಎಷ್ಟು!?

ಬೆಂಗಳೂರು, ಆ. 18: ಚಿನ್ನದ ಬೆಲೆ ಸತತ ಎರಡನೇ ವಾರವೂ ಏರಿಕೆಯ ಹಾದಿಯಲ್ಲಿದ್ದು, ಆಭರಣ ಖರೀದಿದಾರರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆಗಸ್ಟ್ 18ರಂದು ಬೆಂಗಳೂರಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ ₹1,55,890ಕ್ಕೆ ತಲುಪಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ₹230ರಷ್ಟು ಏರಿಕೆಯಾಗಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ ₹1,42,900ಕ್ಕೆ ಏರಿಕೆಯಾಗಿದ್ದು, ಪ್ರತಿ ಗ್ರಾಂಗೆ ₹20ರಷ್ಟು ಹೆಚ್ಚಳವಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಏರಿಕೆ ಕಂಡಿದ್ದು, […]

News

ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು!! : ಪ್ರಶ್ನೆಪತ್ರಿಕೆಗಳಲ್ಲಿ ಹಲವು ದೋಷ, UGC-NET ಮೂರು ವಿಷಯಗಳಿಗೆ ಮರು ಪರೀಕ್ಷೆ

ನವದೆಹಲಿ, ಆ.17: ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತೊಮ್ಮೆ ಎಡವಟ್ಟಿಗೆ ಸಿಲುಕಿದೆ. 2026ರ ಜೂನ್‌ನಲ್ಲಿ ನಡೆದ UGC-NET ಪರೀಕ್ಷೆಯ ಇಂಗ್ಲಿಷ್, ಕಾಮರ್ಸ್ ಮತ್ತು ಸಮಾಜಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ಹಲವು ವಾಸ್ತವಾಂಶ, ಮುದ್ರಣ, ಭಾಷಾಂತರ ಹಾಗೂ ವ್ಯಾಕರಣ ದೋಷಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಮೂರು ವಿಷಯಗಳಿಗೆ ಮರು ಪರೀಕ್ಷೆ ನಡೆಸಲು NTA ನಿರ್ಧರಿಸಿದೆ. ಅಭ್ಯರ್ಥಿಗಳಿಂದ ಬಂದ ಹಲವು ದೂರುಗಳ ಹಿನ್ನೆಲೆಯಲ್ಲಿ NTA ಸಮಿತಿಯೊಂದನ್ನು ರಚಿಸಿ ಪ್ರಶ್ನೆಪತ್ರಿಕೆಗಳನ್ನು ಪರಿಶೀಲಿಸಿತ್ತು. ಈ ವೇಳೆ ಪ್ರಮುಖ ವಿದ್ವಾಂಸರ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft