News

ಮ್ಯಾನ್ಮಾರ್‌‌ ಸೇನೆಯಿಂದಲೇ ಮ್ಯಾನ್ಮಾರ್‌ನಲ್ಲಿ ವೈಮಾನಿಕ ದಾಳಿ!ಬೌದ್ಧ ಮಠವೇ ದಾಳಿಯ ಗುರಿ; 14 ಮಂದಿ ಬಲಿ!

ಯಾಂಗಾನ್, ಆಗಸ್ಟ್ 21: ಮ್ಯಾನ್ಮಾರ್‌ನ ಸಗೈಂಗ್ ಪ್ರದೇಶದಲ್ಲಿರುವ ಬೌದ್ಧ ಮಠದ ಮೇಲೆ ಶುಕ್ರವಾರ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ಮ್ಯಾಂಡಲೇ ನಗರದಿಂದ ಸುಮಾರು 75 ಕಿಲೋಮೀಟರ್ ಪಶ್ಚಿಮದಲ್ಲಿರುವ ಮ್ಯಾಂಗ್ ಟೌನ್‌ಶಿಪ್‌ನ ಸ್ವೆಲ್ ಲೇವೊ ಗ್ರಾಮದ ಬೌದ್ಧ ಮಠದ ಆವರಣಕ್ಕೆ ಯುದ್ಧ ವಿಮಾನದಿಂದ ಬಾಂಬ್ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ವಾರದ ಧ್ಯಾನ […]

News Technology

ಅಂಡಮಾನ್‌ನಲ್ಲಿ ‘ಗ್ರೀನ್ ಎಐ’ ಡೇಟಾ ಸೆಂಟರ್ ಯೋಜನೆಗೆ ತಾತ್ಕಾಲಿಕ ಬ್ರೇಕ್; ಪ್ರಸ್ತಾವ ಆಹ್ವಾನ ಹಿಂಪಡೆದ ಆಡಳಿತ

ಹೊಸದಿಲ್ಲಿ, ಆ.21: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ‘ಗ್ರೀನ್ ಎಐ’ ಡೇಟಾ ಸೆಂಟರ್ ಅಭಿವೃದ್ಧಿಪಡಿಸುವ ಉದ್ದೇಶದಿಂದ ಖಾಸಗಿ ಸಂಸ್ಥೆಗಳಿಂದ ಪ್ರಸ್ತಾವಗಳನ್ನು ಆಹ್ವಾನಿಸಿದ್ದ ಆಡಳಿತವು ಇದೀಗ ಆ ಕರೆಯನ್ನು ಹಿಂಪಡೆದಿದೆ. ಆ.10ರಂದು ಹೊರಡಿಸಿದ್ದ ಪ್ರಸ್ತಾವ ಆಹ್ವಾನವನ್ನು ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಹಿಂಪಡೆಯಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿಗಳ ಕಚೇರಿ ಆ.14ರಂದು ತಿಳಿಸಿದೆ. ಗ್ರೇಟ್ ನಿಕೋಬಾರ್ ಅಥವಾ ಲಿಟಲ್ ಅಂಡಮಾನ್‌ನಲ್ಲಿ ‘ಗ್ರೀನ್ ಎಐ’ ಅಥವಾ ಡೇಟಾ ಸೆಂಟರ್ ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದು ಈ ಪ್ರಸ್ತಾವದ ಉದ್ದೇಶವಾಗಿತ್ತು. ಹೈಪರ್‌ಸ್ಕೇಲ್ ಮತ್ತು ಎಐ […]

GULF News

ಜಿಲ್ಲಾಸ್ಪತ್ರೆಗಳಲ್ಲೇ ಕಿಡ್ನಿ ತಜ್ಞರ ಕೊರತೆ: 29 ರಾಜ್ಯಗಳಲ್ಲಿ ನೆಫ್ರಾಲಜಿಸ್ಟ್‌ಗಳೇ ಇಲ್ಲ!

ನವದೆಹಲಿ, ಆಗಸ್ಟ್ 22, 2026: ಭಾರತದಲ್ಲಿ ಕಿಡ್ನಿ ಕಾಯಿಲೆಗಳ ಚಿಕಿತ್ಸೆಗೆ ಸಂಬಂಧಿಸಿದ ಆರೋಗ್ಯ ವ್ಯವಸ್ಥೆಯ ಗಂಭೀರ ಕೊರತೆ ಸಂಸದೀಯ ಸಮಿತಿಯ ವರದಿಯಿಂದ ಬಹಿರಂಗವಾಗಿದೆ. ದೇಶದ ಕನಿಷ್ಠ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯಾವುದೇ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರೂ ನೆಫ್ರಾಲಜಿಸ್ಟ್‌ (ಮೂತ್ರಪಿಂಡ ರೋಗ ತಜ್ಞ) ಇಲ್ಲ ಎಂಬ ಆತಂಕಕಾರಿ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ತಂತ್ರಜ್ಞರೂ ಲಭ್ಯವಿಲ್ಲ ಎಂದು ತಿಳಿಸಲಾಗಿದೆ. ಜಿಲ್ಲಾ ಹಾಗೂ ಗ್ರಾಮೀಣ ಮಟ್ಟದಲ್ಲಿ ಕಿಡ್ನಿ […]

News

ಪಾಕಿಸ್ತಾನ ಅಲ್ಲ, ಚೀನಾ ಭಾರತಕ್ಕೆ ದೀರ್ಘಾವಧಿಯ ದೊಡ್ಡ, ಸವಾಲು! : ಜನರಲ್ ನರವಾಣೆ

ನವದೆಹಲಿ, ಆಗಸ್ಟ್ 21: ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತಕ್ಕೆ ತಕ್ಷಣದ ಭದ್ರತಾ ಸವಾಲಾಗಿದ್ದರೂ, ದೀರ್ಘಾವಧಿಯಲ್ಲಿ ಚೀನಾವೇ ಭಾರತದ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ ಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಹೇಳಿದ್ದಾರೆ. ತಮ್ಮ ಹೊಸ ಪುಸ್ತಕ ದಿ ಕ್ಯೂರಿಯಸ್ ಅಂಡ್ ದಿ ಕ್ಲಾಸಿಫೈಡ್: ಅನ್‌ಅರ್ಥಿಂಗ್ ಮಿಲಿಟರಿ ಮಿಥ್ಸ್ ಅಂಡ್ ಮಿಸ್ಟರೀಸ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನರವಾಣೆ, ಚೀನಾವನ್ನು ‘ಶತ್ರು’ ಎನ್ನುವುದಕ್ಕಿಂತ ‘ಪ್ರತಿಸ್ಪರ್ಧಿ’ ಎಂದು ಕರೆಯುವುದು ಸೂಕ್ತ ಎಂದು ಹೇಳಿದ್ದಾರೆ. ರಾಜಕೀಯ, ಆರ್ಥಿಕತೆ, ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ […]

News

ಪೆಲೆಟ್ ಗನ್ ಗಾಯದ ಪ್ರಕರಣಕ್ಕೆ FIR ದಾಖಲಿಸುವಂತೆ ಒತ್ತಾಯ: ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

ಹೊಸದಿಲ್ಲಿ, ಆಗಸ್ಟ್ 21, 2026: ಜುಲೈ 20ರಂದು ನಡೆದ ‘ಸಂಸತ್ ಚಲೋ’ ಪ್ರತಿಭಟನೆಯ ವೇಳೆ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದ 19 ವರ್ಷದ ಸಾಹಿಲ್ ಲೋಚಬ್ ಅವರೊಂದಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿದರು. ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಬೇಕೆಂದು ಅವರು ಪೊಲೀಸರನ್ನು ಒತ್ತಾಯಿಸಿದರು. ಪೆಲೆಟ್ ಗನ್‌ನಿಂದ ಗಾಯಗೊಂಡಿರುವ ಬಗ್ಗೆ ದೂರು ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ […]

News

ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ಟಿಎಂಸಿಗೆ ಭರ್ಜರಿ ಪ್ರಾಬಲ್ಯ! ; 23 ಸ್ಥಾನಗಳ ಪೈಕಿ 15 ಗೆಲುವು, ಬಿಜೆಪಿಗೆ 3 ಸ್ಥಾನ

ಕೋಲ್ಕತ್ತಾ, ಆಗಸ್ಟ್ 21, 2026: ಪಶ್ಚಿಮ ಬಂಗಾಳ ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 23 ಚುನಾಯಿತ ಸ್ಥಾನಗಳ ಪೈಕಿ ಟಿಎಂಸಿ ಬೆಂಬಲಿತ ಅಭ್ಯರ್ಥಿಗಳು 15 ಸ್ಥಾನಗಳನ್ನು ಗೆದ್ದು ಬಾರ್ ಕೌನ್ಸಿಲ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಬಿಜೆಪಿಗೆ ಕೇವಲ ಮೂರು ಸ್ಥಾನಗಳು ಲಭಿಸಿವೆ. ಚುನಾವಣೆಯಲ್ಲಿ ಎಡರಂಗವೂ ಮೂರು ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿದೆ. ಮಹಿಳೆಯರಿಗೆ ಮೀಸಲಾದ ಐದು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳು […]

GULF News

ಯಮನ್–ಸೊಮಾಲಿಯಾ ಸಮುದ್ರದಲ್ಲಿ ಕಡಲ್ಗಳ್ಳರ ಅಟ್ಟಹಾಸ: 22 ಭಾರತೀಯರಿದ್ದ ಎರಡು ಹಡಗುಗಳ ಅಪಹರಣ! ಆತಂಕದಲ್ಲಿ ಕುಟುಂಬಸ್ಥರು!

ಸನಾ/ಮೊಗದಿಶು, ಆಗಸ್ಟ್ 21, 2026: ಯಮನ್ ಮತ್ತು ಸೊಮಾಲಿಯಾ ಕರಾವಳಿ ಸಮೀಪ ನಡೆದ ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 22 ಭಾರತೀಯರು ಸೇರಿದಂತೆ ಸಿಬ್ಬಂದಿಯನ್ನು ಹೊಂದಿದ್ದ ಎರಡು ವಾಣಿಜ್ಯ ಹಡಗುಗಳನ್ನು ಶಸ್ತ್ರಸಜ್ಜಿತ ಕಡಲ್ಗಳ್ಳರು ಅಪಹರಿಸಿರುವುದಾಗಿ ವರದಿಯಾಗಿದೆ. ಆಫ್ರಿಕಾದ ಹಾರ್ನ್ ಪ್ರದೇಶದಲ್ಲಿ ಕಡಲ್ಗಳ್ಳತನದ ಆತಂಕ ಮತ್ತೆ ಹೆಚ್ಚುತ್ತಿರುವ ನಡುವೆಯೇ ಈ ಘಟನೆಗಳು ನಡೆದಿವೆ. ಯಮನ್ ಕರಾವಳಿಯಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿರುವ ಏಡನ್ ಕೊಲ್ಲಿಯಲ್ಲಿ ಎರಿಟ್ರಿಯಾ ಧ್ವಜ ಹೊಂದಿರುವ ತೈಲ ಉತ್ಪನ್ನಗಳ ಟ್ಯಾಂಕರ್ M.T. Sibu 1 ಅನ್ನು […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft