ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗೆ ಐತಿಹಾಸಿಕ ಜಯ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ!
- BY admin
- July 25, 2026
- 0 Comments
ನೀಟ್ (NEET-UG) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ದೇಶಾದ್ಯಂತ ತೀವ್ರಗೊಂಡಿರುವ ವಿದ್ಯಾರ್ಥಿಗಳ ಸಾಲು ಸಾಲು ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶನಿವಾರ ತಮ್ಮ ಅಧಿಕೃತ ‘ಎಕ್ಸ್’ (X) ಖಾತೆಯ ಮೂಲಕ ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಕಟಿಸಿರುವ ಅವರು, ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.ಕಳೆದ ಹಲವು ವಾರಗಳಿಂದ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ […]
ಕಾನೂನು ಉಲ್ಲಂಘನೆಯಾದರೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ – ಸಿ.ಟಿ. ರವಿ ವಿರುದ್ಧದ ಎಫ್ಐಆರ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
- BY admin
- July 25, 2026
- 0 Comments
ಬೆಂಗಳೂರು, ಜುಲೈ 25: ಬಿಜೆಪಿ ನಾಯಕ ಸಿ.ಟಿ. ರವಿ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ (FIR) ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದ್ದು, ಯಾರೇ ಕಾನೂನು ಉಲ್ಲಂಘಿಸಿದರೂ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರವು ಯಾವುದೇ ರಾಜಕೀಯ ದ್ವೇಷದ ಉದ್ದೇಶದಿಂದ ಈ ಕ್ರಮ ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.ಸಿ.ಟಿ. ರವಿ ಅವರ ಹೇಳಿಕೆಗಳು ಮತ್ತು […]
ನೀಟ್ ಅಕ್ರಮಕಾರರ ಭೇಟೆಗೆ ಮತ್ತಷ್ಟು ಬೂಸ್ಟ್! ಮಾಸ್ಟರ್ಮೈಂಡ್ ವಿಜಯೇಂದ್ರ ಗುಪ್ತಾ ಬಿಹಾರದಲ್ಲಿ ಬಂಧನ : ಅಕ್ರಮ ತಡೆಗೆ ಶೀಘ್ರವೇ ನೂತನ ಕಾಯ್ದೆ ಜಾರಿಗೆ.
- BY admin
- July 25, 2026
- 0 Comments
ಮುಂಬೈ, ೨೫ ಜುಲೈ ೨೦೨೬: ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ರೂವಾರಿ ಹಾಗೂ ಮಾಸ್ಟರ್ಮೈಂಡ್ ವಿಜಯೇಂದ್ರ ಗುಪ್ತಾನನ್ನು ಥಾಣೆ ಪೊಲೀಸರು ಬಿಹಾರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕಳೆದ ಕೆಲವು ಸಮಯದಿಂದ ತಲೆಮರೆಸಿಕೊಂಡಿದ್ದ ಈತನ ಬಂಧನದಿಂದಾಗಿ ದೇಶದಾದ್ಯಂತ ವಿಸ್ತರಿಸಿದ್ದ ಅಕ್ರಮ ಪ್ರಶ್ನೆಪತ್ರಿಕೆ ಪೂರೈಕೆ ಜಾಲಕ್ಕೆ ಬಹುದೊಡ್ಡ ಆಘಾತ ಉಂಟಾಗಿದೆ. ಅತ್ಯಂತ ಚಾಣಾಕ್ಷತನದಿಂದ ತನಿಖೆ ನಡೆಸಿದ ಪೊಲೀಸ್ ವಿಶೇಷ ತಂಡವು ಆರೋಪಿಯ ಸುಳಿವು ಪಡೆದು, ಬಿಹಾರದಲ್ಲಿ ಅಡಗಿದ್ದ ಸ್ಥಳದ ಮೇಲೆ ದಾಳಿ […]
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಖಾತೆ ತೆರೆದ ಜಂಡು ಕುಮಾರ್; ವಿಶ್ವ ಜೂನಿಯರ್ ಸ್ಕ್ವಾಶ್ ಫೈನಲ್ಗೆ ಅನಾಹತ್ ಸಿಂಗ್ ಐತಿಹಾಸಿಕ ಮುನ್ನಡೆ!
- BY admin
- July 25, 2026
- 0 Comments
ನವದೆಹಲಿ, ಜುಲೈ 25: 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಪವರ್ಲಿಫ್ಟರ್ ಜಂಡು ಕುಮಾರ್ ದೇಶಕ್ಕೆ ಮೊದಲ ಪದಕ ತಂದುಕೊಡುವ ಮೂಲಕ ಹೆಮ್ಮೆಯ ಸಾಧನೆ ಮಾಡಿದ್ದಾರೆ. ಪುರುಷರ 72 ಕೆಜಿ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು ಕಂಚಿನ ಪದಕ ಗೆದ್ದು ಭಾರತದ ಪದಕ ಖಾತೆಯನ್ನು ತೆರೆದಿದ್ದಾರೆ. ಅವರ ಈ ಸಾಧನೆಗೆ ದೇಶದಾದ್ಯಂತ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಇದೇ ವೇಳೆ ಭಾರತದ ಯುವ ಸ್ಕ್ವಾಶ್ ತಾರೆ ಅನಾಹತ್ ಸಿಂಗ್ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವ ಜೂನಿಯರ್ […]
ನಮ್ಮ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಯಾರ ಪಾಲಾಗುತ್ತಿದೆ? ಇಸ್ರೋದ ಭವಿಷ್ಯ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಕುರಿತು ಕಳವಳ!
- BY admin
- July 25, 2026
- 0 Comments
ಬೆಂಗಳೂರು, ಜುಲೈ 25, 2026: ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಎದೆಉಬ್ಬಿಸಿ ನೋಡುವ ‘ಇಸ್ರೋ’ ಸಂಸ್ಥೆ ಇಂದು ಒಂದು ಹೊಸ ಸವಾಲಿನ ಹಂತಕ್ಕೆ ಬಂದು ನಿಂತಿದೆ. ಇತ್ತೀಚಿನ ದಿನಗಳಲ್ಲಿ ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ಮುಕ್ತವಾಗಿ ತೆರೆದುಕೊಡಲಾಗುತ್ತಿದ್ದು, ‘ಸ್ಕೈರೂಟ್’ನಂತಹ ಖಾಸಗಿ ಸಂಸ್ಥೆಗಳು ರಾಕೆಟ್ ಉಡಾಯಿಸುತ್ತಿದ್ದರೆ, ರಿಲಯನ್ಸ್ನಂತಹ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಸಾವಿರಾರು ಉಪಗ್ರಹಗಳನ್ನು ಉಡಾಯಿಸಲು ಪ್ರಾಥಮಿಕ ಅನುಮತಿ ಸಿಗುತ್ತಿದೆ. ಸಾಮಾನ್ಯ ಜನರ ತೆರಿಗೆ ಹಣದಿಂದ ಕಟ್ಟಲ್ಪಟ್ಟ ತಂತ್ರಜ್ಞಾನ ಮತ್ತು ಆಸ್ತಿ-ಪಾಸ್ತಿಗಳು ಈಗ ಹಂತ ಹಂತವಾಗಿ ಖಾಸಗಿ ಉದ್ಯಮಿಗಳ […]
“ನನಗೆ ಟೈಫಾಯಿಡ್ ಆಗಿದೆ. ಆದರೂ ಮುನ್ನುಗ್ಗುವೆ. ಬೇಡಿಕೆ ಈಡೇರುವ ವರೆಗೆ ಹೋರಾಟ ನಿಲ್ಲಿಸುವುದಿಲ್ಲ!”
- BY Irshad
- July 25, 2026
- 0 Comments
-ಅಭಿಜಿತ್ ದಿಪ್ಕೆ






