News

ಹಿಮಾಲಯದಲ್ಲಿ ಹಿಮನದಿ ಕುಸಿತದ ಭೀಕರ ಪರಿಣಾಮ: ನೇಪಾಳ–ಟಿಬೆಟ್ ಗಡಿಯಲ್ಲಿ ಪ್ರವಾಹ, 1,500ಕ್ಕೂ ಹೆಚ್ಚು ಮಂದಿ ನಾಪತ್ತೆ ಶಂಕೆ!

ಕಠ್ಮಂಡು, ಆ.27: ನೇಪಾಳ–ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹ ಹಾಗೂ ಭೂಕುಸಿತದಿಂದ ಭಾರೀ ಅನಾಹುತ ಸಂಭವಿಸಿದ್ದು, ಕನಿಷ್ಠ 160 ಮಂದಿ ಮೃತಪಟ್ಟಿದ್ದಾರೆ. ನೇಪಾಳ ಮತ್ತು ಟಿಬೆಟ್‌ನಾದ್ಯಂತ ಸುಮಾರು 1,500 ಮಂದಿ ನಾಪತ್ತೆಯಾಗಿದ್ದಾರೆ. ನೇಪಾಳದಲ್ಲಿ 826 ಮಂದಿ ಕಾಣೆಯಾಗಿದ್ದು, ಅವರಲ್ಲಿ ಸುಮಾರು 600 ಮಂದಿ ವಿದೇಶಿ ಪ್ರವಾಸಿಗರು ಎನ್ನಲಾಗಿದೆ. ಟಿಬೆಟ್‌ನ ಗೈರಾಂಗ್ ಪ್ರದೇಶದಲ್ಲೂ 558 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಬುಧವಾರ ಬೆಳಗ್ಗೆ ಸುಮಾರು 8:40ರ ವೇಳೆಗೆ ಪರ್ವತ ಪ್ರದೇಶದಲ್ಲಿ ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. […]

News

ಈಡೇರದ 3 ಬೇಡಿಕೆಗಳ ವಿರುದ್ಧ ಮತ್ತೆ ಹೋರಾಟಕ್ಕೆ CJP ಸಜ್ಜು; ಸೆ.5ರಂದು ದಿಲ್ಲಿಯಲ್ಲಿ ಪ್ರತಿಭಟನೆ

ಹೊಸದಿಲ್ಲಿ: ಸರಕಾರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಕ್ಯಾಂಪೇನ್ ಫಾರ್ ಜಸ್ಟಿಸ್ ಅಂಡ್ ಪೀಸ್ (CJP), ತನ್ನ ಬೇಡಿಕೆಗಳು ಇನ್ನೂ ಈಡೇರದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರತಿಭಟನೆಗೆ ಮುಂದಾಗಿದೆ. ಸೆಪ್ಟೆಂಬರ್ 5ರಂದು ಹೊಸದಿಲ್ಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಘೋಷಿಸಿದೆ. ಸರಕಾರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು CJP ಈ ಹಿಂದೆ ಪ್ರತಿಭಟನೆ ನಡೆಸಿತ್ತು. ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರೂ, ತಮ್ಮ ಬೇಡಿಕೆಗಳ ಕುರಿತು ಸರ್ಕಾರದಿಂದ ನಿರೀಕ್ಷಿತ ಕ್ರಮ […]

Sports

ಜಡೇಜಾ ನೋ-ಬಾಲ್‌ಗಳೇ ಟೀಂ ಇಂಡಿಯಾಗೆ ತಲೆನೋವು; 88 ಎಸೆತಗಳ ಕಳಪೆ ದಾಖಲೆ!

ಹೊಸದಿಲ್ಲಿ, ಆಗಸ್ಟ್ 27: ಭಾರತದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ನೋ-ಬಾಲ್ ಸಮಸ್ಯೆ ಇದೀಗ ಟೀಂ ಇಂಡಿಯಾಗೆ ಚಿಂತೆಯ ವಿಷಯವಾಗಿ ಪರಿಣಮಿಸಿದೆ. 2021ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ ಒಟ್ಟು 88 ನೋ-ಬಾಲ್‌ಗಳನ್ನು ಎಸೆದಿದ್ದು, ಸ್ಪಿನ್ನರ್‌ಗಳ ಪೈಕಿ ಇದು ಅತ್ಯಧಿಕ ಸಂಖ್ಯೆಯಾಗಿದೆ. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲೂ ಜಡೇಜಾ ಈ ಸಮಸ್ಯೆಯಿಂದ ಹೊರಬಂದಿಲ್ಲ. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮೂರು ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಒಂದು ನೋ-ಬಾಲ್ ಎಸೆದಿದ್ದಾರೆ. 2021ರಿಂದ ಅತಿ ಹೆಚ್ಚು ನೋ-ಬಾಲ್ ಎಸೆದ ಸ್ಪಿನ್ನರ್‌ಗಳ […]

Business News

ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಆಭರಣ ಖರೀದಿದಾರರಿಗೆ ಕೊಂಚ ನೆಮ್ಮದಿ

ಮಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಸತತ ಎರಡನೇ ದಿನವೂ ಇಳಿಕೆ ಕಂಡುಬಂದಿದ್ದು, ಆಭರಣ ಖರೀದಿದಾರರ ಗಮನ ಸೆಳೆದಿದೆ. ಆಗಸ್ಟ್ ಆರಂಭದಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಇದೀಗ ಮತ್ತೆ ಕೊಂಚ ಕುಸಿತ ದಾಖಲಿಸಿದೆ. ಆಗಸ್ಟ್ 27ರಂದು ಮಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ ಪ್ರತಿ ಗ್ರಾಂಗೆ ₹16,298ಕ್ಕೆ ಇಳಿದಿದ್ದು, 10 ಗ್ರಾಂಗೆ ₹1,62,980 ಆಗಿದೆ. 22 ಕ್ಯಾರೆಟ್ ಆಭರಣ ಚಿನ್ನದ ದರ ಪ್ರತಿ ಗ್ರಾಂಗೆ ₹14,940ಕ್ಕೆ ಇಳಿದಿದ್ದು, 10 ಗ್ರಾಂಗೆ ₹1,49,400ಕ್ಕೆ ತಲುಪಿದೆ. […]

Business GULF

ಇರಾನ್ ಜೊತೆ ಹಣಕಾಸು ವ್ಯವಹಾರ ಮುಂದುವರಿಸಿದರೆ ಅಮೆರಿಕದ ಡಾಲರ್ ವ್ಯವಸ್ಥೆಯಿಂದಲೇ ಹೊರಕ್ಕೆ : ರಾಷ್ಟ್ರಗಳಿಗೆ ಟ್ರಂಪ್ ಎಚ್ಚರಿಕೆ!

ವಾಷಿಂಗ್ಟನ್: ಇರಾನ್ ಜೊತೆ ಹಣಕಾಸು ವ್ಯವಹಾರ ಮುಂದುವರಿಸುವ ದೇಶಗಳು ಮತ್ತು ಸಂಸ್ಥೆಗಳ ವಿರುದ್ಧ ಅಮೆರಿಕ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದೆ. ಇರಾನ್‌ನೊಂದಿಗೆ ವ್ಯಾಪಾರ ಹಾಗೂ ಹಣಕಾಸಿನ ಸಂಪರ್ಕ ಕಡಿತಗೊಳಿಸದಿದ್ದರೆ, ಅಮೆರಿಕದ ಡಾಲರ್ ಆಧಾರಿತ ಜಾಗತಿಕ ಹಣಕಾಸು ವ್ಯವಸ್ಥೆಯಿಂದಲೇ ಹೊರಗಿಡುವಂತಹ ಕ್ರಮಗಳನ್ನು ಎದುರಿಸಬೇಕಾಗಬಹುದು ಎಂದು ಅಮೆರಿಕದ ಖಜಾನೆ ಇಲಾಖೆ ಎಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ಹೇಳುವುದಾದರೆ, ಇದು ಕೇವಲ ಇರಾನ್‌ಗೆ ನೀಡಿರುವ ಎಚ್ಚರಿಕೆಯಲ್ಲ; ಇರಾನ್ ಜೊತೆ ವ್ಯವಹರಿಸುವ ಇತರ ದೇಶಗಳು, ಬ್ಯಾಂಕ್‌ಗಳು ಮತ್ತು ಕಂಪನಿಗಳಿಗೂ ಅಮೆರಿಕ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ. […]

News ಸಿನಿಮಾ

‘ಟಾಕ್ಸಿಕ್‌’ಗೆ ಮಿಶ್ರ ಪ್ರತಿಕ್ರಿಯೆ; ಯಶ್‌ ಅಭಿನಯಕ್ಕೆ ಭಾರೀ ಮೆಚ್ಚುಗೆ, “ಕಥೆ–ನಿರೂಪಣೆ ಕಳಪೆಯಾಗಿದೆ” ಟೀಕೆ

ಬೆಂಗಳೂರು, ಆಗಸ್ಟ್ 26: ರಾಕಿಂಗ್‌ ಸ್ಟಾರ್ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಮೊದಲ ಪ್ರದರ್ಶನಗಳ ಬಳಿಕ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಯಶ್‌ ಅವರ ಸ್ಕ್ರೀನ್‌ ಪ್ರೆಸೆನ್ಸ್‌, ಆಕ್ಷನ್‌ ದೃಶ್ಯಗಳು, ದೃಶ್ಯ ವೈಭವ ಹಾಗೂ ಕೆಲವು ಪ್ರಮುಖ ಸನ್ನಿವೇಶಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ತಾಂತ್ರಿಕ ಗುಣಮಟ್ಟ, ಛಾಯಾಗ್ರಹಣ ಮತ್ತು ಅದ್ಧೂರಿ ನಿರೂಪಣೆ ಗಮನ ಸೆಳೆಯುತ್ತದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ವಿಶೇಷವಾಗಿ ಯಶ್‌ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft