ತಮಿಳು ಕವಿ, ಸಿನಿಮಾ ಗೀತೆ ರಚನೆಕಾರ ವೈರಮುತ್ತುಗೆ ಜ್ಞಾನಪೀಠ: ಸಾಹಿತ್ಯಿಕ ಗೌರವವೋ ಅಥವಾ ನೈತಿಕ ಹಿನ್ನಡೆಯೋ? ಏನಿದು ವಿವಾದ!?
ಚೆನ್ನೈ, ಮಾರ್ಚ್ 17, 2026: ಖ್ಯಾತ ತಮಿಳು ಕವಿ ಮತ್ತು ಗೀತರಚನೆಕಾರ ವೈರಮುತ್ತು ಅವರಿಗೆ 2025ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗಿರುವುದು ದೇಶಾದ್ಯಂತ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ದಶಕಗಳ ಕಾಲ ತಮಿಳು ಸಾಹಿತ್ಯ ಮತ್ತು ಚಿತ್ರರಂಗಕ್ಕೆ ಸಲ್ಲಿಸಿದ ಕೊಡುಗೆಗಾಗಿ ಈ ಅತ್ಯುನ್ನತ ಗೌರವ ನೀಡಲಾಗಿದ್ದರೂ, ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಲೈಂಗಿಕ ಕಿರುಕುಳದ ಆರೋಪಗಳು ಪ್ರಶಸ್ತಿಯ ಘನತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಈ ವಿವಾದದ ಕೇಂದ್ರಬಿಂದು 2018ರ ‘ಮೀಟೂ’ (#MeToo) ಚಳವಳಿ. ಆ ಸಮಯದಲ್ಲಿ ಗಾಯಕಿ […]




