News ಸಿನಿಮಾ

GST – ‘Ghosts in Trouble’ ; ಇಂದು ಬಿಡುಗಡೆ. ಇದು ಹಾರರ್ ಕಾಮಿಡಿ ಸಂಯೋಜನೆಯ ಹೊಸ ಪ್ರಯೋಗ.

ಸಿನಿಮಾ ಹಂಗಾಮ, ನವೆಂಬರ್ 28: ಇಂದು ತೆರೆಗೆ ಬಂದಿರುವ ಸೃಜನ್ ಲೋಕೇಶ್ ನಿರ್ದೇಶನದ ‘GST – Ghosts in Trouble’ ಸಿನಿಮಾ ಪ್ರೇಕ್ಷಕರ ಕುತೂಹಲ ಸೆಳೆದಿದೆ. ಹಾರರ್ ಹಾಗೂ ಕಾಮಿಡಿ ಎರಡನ್ನೂ ಸೇರಿಸಿ ಮನರಂಜನೆ ನೀಡುವ ಉದ್ದೇಶದಿಂದ ನಿರ್ಮಿಸಲಾದ ಈ ಚಿತ್ರದಲ್ಲಿ, ಭೂತಗಳ ನಡುವೆ ಸಿಲುಕಿಕೊಂಡಿರುವ ಸಾಮಾನ್ಯ ಜನರ ಗೊಂದಲ, ಭಯ ಹಾಗೂ ಅವುಗಳಿಂದ ಉಂಟಾಗುವ ಹಾಸ್ಯಪ್ರದ ಸಂದರ್ಭಗಳೇ ಕಥೆಯ ಮೂಲ. ಚಿತ್ರದ ನಿರ್ದೇಶಕ ಸೃಜನ್ ಲೋಕೇಶ್ ಹೊಸ ಶೈಲಿಯ ಪ್ರಯೋಗಕ್ಕೆ ಕೈ ಹಾಕಿದ್ದು, ಭಯ ಮೂಡಿಸುವ […]

News

ಚಿನ್ನ ,ಬೆಳ್ಳಿ ಗೆದ್ದ ರಾಜ್ಯದ ಆಟಗಾರ್ತಿಯರಿಗೆ 5 ಲಕ್ಷ ರೂ ಪ್ರೋತ್ಸಾಹಧನ ಸನ್ಮಾನ!

ಢಾಕಾದಲ್ಲಿ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ ಭಾರತ ತಂಡದ ಕರ್ನಾಟಕದ ಆಟಗಾರ್ತಿ “ಧನಲಕ್ಷ್ಮಿ” ಹಾಗೂ ಚೈನಾದಲ್ಲಿ ನಡೆದ ಕಿರಿಯರ ಏಷ್ಯನ್ ಬ್ಯಾಡ್ಮಿಂಟನ್ ಸಿಂಗಲ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ “ಲಕ್ಷ್ಯ ರಾಜೇಶ್” ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ, ಸನ್ಮಾನ ಮಾಡಿ, ತಲಾ ಐದು ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಿ ಗೌರವಿಸಿದ್ದಾರೆ.‌

Business

ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್

Post Office Recurring Deposit scheme: ಅಂಚೆ ಕಚೇರಿಯಲ್ಲಿರುವ ಹಲವು ಸಣ್ಣ ಉಳಿತಾಯ ಯೋಜನೆಗಳಲ್ಲಿ ರಿಕರಿಂಗ್ ಡೆಪಾಸಿಟ್ ಅಕೌಂಟ್ ಪ್ಲಾನ್ ಒಂದು. ಐದು ವರ್ಷದವರೆಗೆ ಮಾಸಿಕವಾಗಿ ಹಣ ಕಟ್ಟುತ್ತಾ ಹೋಗಬೇಕು. ಇದರ ಹಣ ಪ್ರತೀ ಕ್ವಾರ್ಟರ್​ಗೆ ಕಾಂಪೌಂಡಿಂಗ್ ಆಗುತ್ತದೆ. ಈ ಸ್ಕೀಮ್​ಗೆ ಸದ್ಯ ಶೇ. 6.7 ಬಡ್ಡಿ ನಿಗದಿ ಮಾಡಲಾಗಿದೆ. ಕನಿಷ್ಠ ಮಾಸಿಕ ಹೂಡಿಕೆ 100 ರೂ ಇದೆ. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಮ್ಯೂಚುವಲ್ ಫಂಡ್ ಎಸ್​ಐಪಿ, ಬ್ಯಾಂಕ್ ಆರ್​ಡಿ ರೀತಿ ಪೋಸ್ಟ್ ಆಫೀಸ್ ರೆಕರಿಂಗ್ […]

GULF News

ಪೀಕ್ ಸೀಸನ್‌ನಲ್ಲಿ ಭಾರತ-ಯುಎಇ ವಾಯುನೆಲೆ ಒಪ್ಪಂದವು ಹೆಚ್ಚಿನ ವಿಮಾನಗಳಿಗೆ ಅವಕಾಶ ನೀಡಬೇಕು ; ಟ್ರಾವೆಲ್ ಏಜೆಂಟ್ಸ್.

ಯುಎಇ – ಇಂಡಿಯಾ :ಭಾರತ-ಯುಎಇ ದರಗಳು ವಿಪರೀತ ಗರಿಷ್ಠ ಮಟ್ಟವನ್ನು ತಲುಪಿರುವುದರಿಂದ ಒಪ್ಪಂದಗಳನ್ನು ಪರಿಷ್ಕರಿಸುವಂತೆ ಟ್ರಾವೆಲ್ ಏಜೆಂಟರು ಒತ್ತಾಯಿಸಿದ್ದಾರೆ. ಯುಎಇ ರಾಷ್ಟ್ರೀಯ ದಿನಾಚರಣೆ ಮತ್ತು ವರ್ಷಾಂತ್ಯದ ರಜಾದಿನಗಳಿಗೆ ಮುನ್ನ ಟಿಕೆಟ್ ಬೆಲೆಗಳು ಗಗನಕ್ಕೇರಿದ ನಂತರ ಭಾರತ-ಯುಎಇ ವಾಯು ದ್ವಿಪಕ್ಷೀಯ ಒಪ್ಪಂದಗಳನ್ನು ಮರುಪರಿಶೀಲಿಸುವಂತೆ ಪ್ರಯಾಣ ತಜ್ಞರು ಒತ್ತಾಯಿಸುತ್ತಿದ್ದಾರೆ . ಅಭೂತಪೂರ್ವ ಬೇಡಿಕೆ, ವಿಮಾನ ಸಾಮರ್ಥ್ಯದ ಸ್ಥಗಿತತೆಯಿಂದಾಗಿ ಭಾರತಕ್ಕೆ ಹೋಗುವ ಮಾರ್ಗಗಳ ಪ್ರಯಾಣ ದರಗಳು ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿವೆ ಎಂದು ಪ್ರಯಾಣ ಏಜೆಂಟರು ಹೇಳುತ್ತಾರೆ. “ಪ್ರತಿ ವರ್ಷ, ವಲಸಿಗರು […]

Sports

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬಳಿಕ IPL ತಂಡದ ಮಾಲೀಕರಿಂದ BCCIಗೆ ಕಹಿ ಸಂದೇಶ!

ಗುಹಾವಟಿ : ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ-ಮಾಲೀಕ ಪಾರ್ಥ್ ಜಿಂದಾಲ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ-ಮಾಲೀಕ ಪಾರ್ಥ್ ಜಿಂದಾಲ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ಗುವಾಹಟಿಯ ಬರ್ಸಪಾರ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 408 ರನ್‌ಗಳ ಬೃಹತ್ ಸೋಲನ್ನು ಅನುಭವಿಸಿತು, ಇದರ ಪರಿಣಾಮವಾಗಿ ಮುಖ್ಯ ಕೋಚ್ ಗೌತಮ್ ಗಂಭೀರ್ ಭಾರಿ ಟೀಕೆಗೆ […]

News

ಕರ್ನಾಟಕದಲ್ಲಿ 9 ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್; ಕುಮಾರಸ್ವಾಮಿಯ ಪ್ರಸ್ತಾಪ ಪರಿಗಣಿಸಿದ ಕೇಂದ್ರ ಸರ್ಕಾರ !

ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು‌, ಬೀದರ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಒಲವು ತೋರಿದೆ. ವಾರಗಳ ಹಿಂದೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕೆ ,ವಾಣಿಜ್ಯ ಸಚಿವ ಪೀಯೂಶ್ ಗೋಯಲ್‌ರನ್ನು ಭೇಟಿಯಾಗಿ ಈ ಯೋಜನೆಯ ಅನುಷ್ಠಾನಕ್ಕೆ ಕೋರಿದ್ದರು.

News

ವಿವಾದಕ್ಕೆ ಕಾರಣವಾದ ಕುನಾಲ್ ಕಾಮ್ರಾ ಧರಿಸಿದ ಆರೆಸ್ಸೆಸ್ ಟಿ-ಶರ್ಟ್ ; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಿಜೆಪಿ-ಶಿವಸೇನೆ‌ !!

ಹಾಸ್ಯನಟ ಕುನಾಲ್ ಕಾಮ್ರಾ ಆರ್‌ಎಸ್‌ಎಸ್ ಟಿ-ಶರ್ಟ್ ಧರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಬಿಜೆಪಿ ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಪೊಲೀಸ್ ಕ್ರಮದ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ ಸಚಿವರು ಆನ್‌ಲೈನ್‌ನಲ್ಲಿ ‘ಆಕ್ಷೇಪಾರ್ಹ ವಿಷಯ’ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಕಾಮ್ರಾ ಹಿಂದೆ ಮೋದಿ ಮತ್ತು ಶಿಂಧೆ ವಿರುದ್ಧವೂ ಟೀಕೆ ಮಾಡಿದ್ದರು. ಕಾಮಿಡಿಯನ್ ಕುನಾಲ್ ಕಾಮ್ರಾ (Kunal Kamra) ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಅಪಹಾಸ್ಯ ಮಾಡುವ ಟಿ-ಶರ್ಟ್ […]

ಸಿನಿಮಾ

‘ನೀವು ಕರೆದರೆ ಬರದೇ ಇರಲು ಆಗುತ್ತ’ ಐಟಿ ಇಲಾಖೆ ರಾಜ್ಯೋತ್ಸವದಲ್ಲಿ ಯಶ್

Yash: ನಟ ಯಶ್ ಅವರು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ ಅವರು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಇಲಾಖೆಯೊಂದು ಆಯೋಜಿಸಿದ್ದ ಸರಳವಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ಯಶ್ ಭಾಗವಹಿಸಿದ್ದರು. ಮಾತ್ರವಲ್ಲದೆ ಯಶ್ ಅವರು ಹಾರಿಸಿದ ಹಾಸ್ಯ ಚಟಾಕಿಗೆ ಸಭಿಕರು ನಗೆ ಗಡಲಲ್ಲಿ ತೇಲಿದರು. ಕನ್ನಡದ ಬಗ್ಗೆ ಯಶ್ ಅರ್ಥಪೂರ್ಣ ಮಾತುಗಳನ್ನಾಡಿದರು. ಯಶ್ (Yash) ತಮ್ಮ ‘ಟಾಕ್ಸಿಕ್’ ಸಿನಿಮಾನಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಅವರು ಯಾವುದೇ ಸಿನಿಮಾ ಕಾರ್ಯಕ್ರಮ, ಖಾಸಗಿ ಕಾರ್ಯಕ್ರಮಗಳನ್ನು ಸಹ ಅಟೆಂಡ್ ಮಾಡುತ್ತಿಲ್ಲ. ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೂ ಸಹ […]

Health +

ಈ ಭಾಗಗಳಲ್ಲಿ ನೋವು ಕಂಡುಬಂದರೆ ನಿರ್ಲಕ್ಷಿಸಬೇಡಿ ಇದು ಥೈರಾಯ್ಡ್ ಲಕ್ಷಣವಾಗಿರಬಹುದು!

ನಿಮಗೆ ತಿಳಿದಿರಬಹುದು, ಕುತ್ತಿಗೆಯಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿಯನ್ನು ನಾವು ಥೈರಾಯ್ಡ್ ಗ್ರಂಥಿ ಎಂದು ಕರೆಯುತ್ತೇವೆ. ಇದರಲ್ಲಿ ಅಸಮತೋಲನ ಉಂಟಾದಾಗ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಆದರೆ ಈ ರೀತಿಯಾಗುವ ಮೊದಲು ದೇಹ ನಿಮಗೆ ಕೆಲವು ಲಕ್ಷಣಗಳ ಮೂಲಕ ಎಚ್ಚರಿಸುತ್ತದೆ. ಅವುಗಳನ್ನು ನಿರ್ಲಕ್ಷ್ಯ ಮಾಡದೆಯೇ ಸರಿಯಾಗಿ ಗುರುತಿಸುವುದು ಬಹಳ ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಯಲ್ಲಿ ಅಸಮತೋಲನವಾದಾಗ ದೇಹದ ವಿವಿಧ ಭಾಗಗಳಲ್ಲಿ ನೋವು ಕಂಡುಬರುತ್ತದೆ. ಹಾಗಾದರೆ ದೇಹದ ಯಾವ ಭಾಗಗಳಲ್ಲಿ ನೋವು ಕಂಡುಬರುತ್ತದೆ, ಥೈರಾಯ್ಡ್ ನಿಂದ ಯಾವ ರೀತಿಯ […]

GULF News

ಪಾಕಿಸ್ತಾನದ ಜೈಲಿನೊಳಗೆ ಮಾಜಿ ಪ್ರಧಾನಿಯನ್ನೇ ಹತ್ಯೆ ಮಾಡಲಾಯಿತೇ !?

ಪಾಕಿಸ್ತಾನದಲ್ಲಿ ಜೈಲುವಾಸ ಅನುಭವಿಸುತ್ತಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಅವರ ಸಹೋದರಿ ಭೇಟಿ ಮಾಡಲು ಪದೇ ಪದೇ ನಿರಾಕರಿಸುತ್ತಿರುವುದಕ್ಕೆ ಕಾರಣ ; ಇಮ್ರಾನ್ ಖಾನ್‌ರನ್ನು ಐಎಸ್‌ಐ ಜೈಲಿನಲ್ಲಿ ಹತ್ಯೆ ಮಾಡಿದೆ ಎಂದು ಆರೋಪಿಸಿ ಅಫ್ಘಾನ್ ಟೈಮ್ಸ್ ವರದಿ ಮಾಡಿದೆ. ಆದರೆ ಖಚಿತ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft