Sports

IND vs AUS: ಹೋಬಾರ್ಟ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಟೀಂ ಇಂಡಿಯಾ

India vs Australia T20: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೋಬಾರ್ಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 186 ರನ್‌ಗಳ ಗುರಿಯನ್ನು ಸೂರ್ಯಕುಮಾರ್ ಪಡೆ ಯಶಸ್ವಿಯಾಗಿ ಬೆನ್ನಟ್ಟಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದು, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಭಾರತದ ಈ ಗೆಲುವು ಸರಣಿಯಲ್ಲಿ ಮಹತ್ವದ್ದಾಗಿದೆ. ಹೋಬಾರ್ಟ್‌ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ […]

News

ಬೆಂಗಳೂರು ಪೂರ್ವದ ವಿವಿಧ ಕಡೆ ಗೋಡೆಗಳನ್ನು ಪರೀಕ್ಷಿಸಿ, ಪೋಸ್ಟರ್‌ಗಳನ್ನು ಅಂಟಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದ: ಜಿಬಿಎ ಮುಖ್ಯ ಆಯುಕ್ತ.

ಬೆಂಗಳೂರು :ಮಹೇಶ್ವರ್ ರಾವ್ ಅವರು ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ ಶುಕ್ರವಾರ ಪರಿಶೀಲನೆ ನಡೆಸಿ ,ದೇವರಬೀಸನಹಳ್ಳಿ ಬಳಿಯ ಮರಗಳ ಮೇಲಿನ ಪೋಸ್ಟರ್‌ಗಳನ್ನು ವೀಕ್ಷಿಸಿದರು. ಪೋಸ್ಟರ್ ಗಳು ನಗರದ ಸೌಂದರ್ಯವನ್ನು ನಾಶಪಡಿಸುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.ಬಳಿಕ ಅಸ್ತಿತ್ವದಲ್ಲಿರುವ ಪೋಸ್ಟರ್‌ಗಳನ್ನು ತೆಗೆದುಹಾಕಲು ಆದೇಶಿಸಿದರು. ಅಲ್ಲದೆ, ಮರಗಳು ಮತ್ತು ಸಾರ್ವಜನಿಕ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವುದು ಕಂಡುಬಂದರೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಪಣತ್ತೂರು ಎಸ್ ಕ್ರಾಸ್ ಮತ್ತು ಬಳಗೆರೆ ರಸ್ತೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ […]

News

ಪ್ರತಿ ಮಗುವಿನ ಪಠ್ಯ ಮಾಧ್ಯಮ ಮಾತೃಭಾಷೆಯೇ ಆಗುವಂತಹ ಕಾನೂನು ತರಬೇಕು, ಕೇಂದ್ರವು ಕನ್ನಡವನ್ನು ನಿರ್ಲಕ್ಷಿಸಿ, ಹಿಂದಿಯನ್ನು ಹೇರುತ್ತಿದೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು :ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲು ಕಾನೂನನ್ನು ತರಬೇಕೆಂದು ಒತ್ತಾಯಿಸಿದ ಮುಖ್ಯಮಂತ್ರಿ, ಇಂಗ್ಲಿಷ್ ಮತ್ತು ಹಿಂದಿ “ಮಕ್ಕಳ ಪ್ರತಿಭೆಯನ್ನು ದುರ್ಬಲಗೊಳಿಸುತ್ತಿವೆ. ಕನ್ನಡ ವಿರೋಧಿಗಳನ್ನು ರಾಜ್ಯದ ಜನತೆ ಒಂದಾಗಿ ವಿರೋಧಿಸಬೇಕು” ಎಂದು ಕನ್ನಡ ರಾಜ್ಯೋತ್ಸವ ಆಚರಣೆಯ ಭಾಷಣದಲ್ಲಿ ಹೇಳಿದರು. ಇಂಗ್ಲಿಷ್, ಹಿಂದಿ ನಮ್ಮ ಮಕ್ಕಳ ಪ್ರತಿಭೆಯನ್ನು ದುರ್ಬಲಗೊಳಿಸುತ್ತಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಕ್ಕಳು ಮಾತೃಭಾಷೆಯಲ್ಲಿ ಯೋಚಿಸುತ್ತಾರೆ, ಕಲಿಯುತ್ತಾರೆ, ಕನಸು ಕಾಣುತ್ತಾರೆ ಆದರೆ ಇಲ್ಲಿ ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿದೆ” ಎಂದು ರಾಜ್ಯೋತ್ಸವ ಭಾಷಣದ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದರು. “ಹಿಂದಿ, ಸಂಸ್ಕೃತದ […]

News

ಬೆಳಗಾವಿಯ ಕನ್ನಡ ರಾಜ್ಯೋತ್ಸವ ಕಂಡೀರಾ..!! ಮಧ್ಯರಾತ್ರಿಯಿಂದಲೇ ಆಚರಣೆಗೆ ಚಾಲನೆ, ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಸಾವಿರಾರು ಜನ..!!

ಬೆಳಗಾವಿ : ತಡರಾತ್ರಿಯಿಂದಲೇ ಬೆಳಗಾವಿಯ ಬೀದಿಗಳಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಝೇಂಕಾರಗಳು ಮುಗಿಲು ಮುಟ್ಟಿವೆ.ಪ್ರತಿವರ್ಷದಂತೆ ಈ ಬಾರಿಯೂ ಗಡಿನಾಡ ಕನ್ನಡಿಗರು ರಾತ್ರಿಯೇ ಉತ್ಸವಕ್ಕೆ ಸಮಾವೇಶಗೊಂಡರು. ರಾತ್ರಿ 10ರ ನಂತರ ಏಕಾಏಕಿ ಸೇರಿದ ಕನ್ನಡಿಗರು ಇನ್ನಿಲ್ಲದಂತೆ ಸಂಭ್ರಮಿಸಿದರು. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರದ ಜನರಿಂದ ಇಡೀ ವೃತ್ತ ಕಿಕ್ಕಿರಿದು ತುಂಬಿತು. ಪರಿಣಾಮ ವೃತ್ತದ ನಾಲ್ಕೂ ದಿಕ್ಕಿನ ಸಂಚಾರ ಸಂಪೂರ್ಣ ಬಂದ್‌ ಆಯಿತು.ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡ ಸಂಘಟನೆಗಳ ಕಾರ್ಯಕರ್ತರು ಇದೇ ಮೊದಲ ಬಾರಿಗೆ ಸಿಡಿ ಮದ್ದಿನ […]

News

ನವೆಂಬರ್ 10,12 ರಂದು ದಕ್ಷಿಣ ಕನ್ನಡದಲ್ಲಿ ಸರ್ದಾರ್@150 ಯುನಿಟಿ ವಾಕ್ : ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು: ದಕ್ಷಿಣ ಕನ್ನಡದ ಎರಡು ಕಡೆಗಳಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಆದೇಶದ ಮೇರೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಲು ನವೆಂಬರ್ 10 ರಂದು ಮಂಗಳೂರಿನಲ್ಲಿ ಮತ್ತು ನವೆಂಬರ್ 12 ರಂದು ಪುತ್ತೂರಿನಲ್ಲಿ ಸರ್ದಾರ್@150 ಯುನಿಟಿ ವಾಕ್ ಆಯೋಜಿಸಲಾಗುವುದು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕ್ಯಾಪ್ಟನ್ ಚೌಟ, ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿರುವ […]

ಸಿನಿಮಾ

ಒಟಿಟಿ ಪ್ರೇಕ್ಷಕರಿಗೆ ಹಬ್ಬ..!! ಕಾಂತಾರ ಎ ಲೆಜೆಂಡ್,ಲೋಕ ಚಾಪ್ಟರ್ 1,ಬ್ಲಾಕ್‌ಮೇಲ್ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯ ಬಿಸಿಯಲ್ಲಿ ..!!

ಸಿನಿಮಾ ಅಭಿಮಾನಿಗಳ ಲೋಕವನ್ನು ತುದಿಗಾಲಲ್ಲಿ ನಿಲ್ಲಿಸಿದ ತ್ರಿಲ್ಲರ್ ,ಡ್ರಾಮಾ , ಸೂಪರ್ ಹೀರೋ ಚಿತ್ರಗಳಾದ ಕಾಂತಾರ ಎ ಲೆಜೆಂಡ್,ಲೋಕ ಚಾಪ್ಟರ್ 1, ಬ್ಲಾಕ್ ಮೇಲ್ ಚಿತ್ರಗಳು ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳು‌ ಒಟಿಟಿ ಸೇರುವ ಹಾದಿಯಲ್ಲಿದೆ. ಹಬ್ಬದ ಋತು ಮುಗಿಯುತ್ತಿದ್ದಂತೆ, ದಕ್ಷಿಣ ಭಾರತದ ಕೆಲವು ದೊಡ್ಡ ಮತ್ತು ವೈವಿಧ್ಯಮಯ ಬಿಡುಗಡೆಗಳೊಂದಿಗೆ OTT ಜಾಗವು ಬಿಸಿಯಾಗುತ್ತಿದೆ. ಸೂಪರ್‌ಹೀರೋ ಸಾಹಸಗಳು ಮತ್ತು ಪೌರಾಣಿಕ ನಾಟಕಗಳಿಂದ ಹಿಡಿದು ಭಾವನಾತ್ಮಕ ಸಂಕಲನಗಳು ಮತ್ತು ಸೆರೆಹಿಡಿಯುವ ಥ್ರಿಲ್ಲರ್‌ಗಳವರೆಗೆ, ಈ ವಾರ ಪ್ರತಿಯೊಂದು […]

News

ಶೃಂಗೇರಿಯಲ್ಲೊಂದು ದುರ್ಘಟನೆ!! ಇಬ್ಬರನ್ನು ತುಳಿದು ಕೊಂದ‌ ಕಾಡಾನೆ!!

ಚಿಕ್ಕಮಗಳೂರು: ದನದ ಕೊಟ್ಟಿಗೆಗೆ ಎಲೆಯನ್ನು ತರಲು ಕಾಡಿಗೆ ಹೋದ ಇಬ್ಬರನ್ನು ಕಾಡಾನೆ ದಾಳಿ ಮಾಡಿ ತುಳಿದು ಕೊಂದ ಘಟನೆ ಶೃಂಗೇರಿಯಲ್ಲಿ ನಡೆದಿದೆ. ಮೃತರನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೊರವಲಯದಲ್ಲಿರುವ ಹಳ್ಳಿಯ ನಿವಾಸಿಗಳಾದ ಉಮೇಶ್ (43) ಮತ್ತು ಹರೀಶ್ (42) ಎಂದು ಗುರುತಿಸಲಾಗಿದೆ. ಶುಕ್ರವಾರ ಕಾಡು ಆನೆಯೊಂದು ಇಬ್ಬರು ಪುರುಷರನ್ನು ತುಳಿದು ಕೊಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಘಟನೆಯಲ್ಲಿ ಭಾಗಿಯಾದ ಆನೆಯನ್ನು ಪತ್ತೆ ಹಚ್ಚಿ ಸೆರೆಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ ಎಂದು […]

News

ಮುಂಬೈನಲ್ಲೊಂದು ಸಿನಿಮೀಯ ಘಟನೆ, ಆಡಿಷನ್‌ಗೆಂದು ಕರೆಸಿ 17 ಮಕ್ಕಳ ಕಿಡ್ನ್ಯಾಪ್..!! ಆರೋಪಿಯ ಎನ್ ಕೌಂಟರ್..!

ಮುಂಬೈ :ವೆಬ್ ಸೀರೀಸ್ಗೆ ಆಡಿಷನ್ ನಡೆಸಲಾಗುತ್ತಿದೆ ಎಂದು 17 ಮಕ್ಕಳನ್ನು ಕರೆಸಿದ್ದ ರೋಹಿತ್ ಆರ್ಯ ಎಂಬ ವ್ಯಕ್ತಿ ಮುಂಬೈನ (Mumbai) ಆರ್ಎಸ್ ಸ್ಟುಡಿಯೋದಲ್ಲಿ ಆ ಮಕ್ಕಳು ಮತ್ತು ಇನ್ನಿಬ್ಬರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ನಂತರ ಪೊಲೀಸರಿಗೆ ವಿಡಿಯೋ ಸಂದೇಶವೊಂದನ್ನು ಕಳುಹಿಸಿದ್ದರು. ಕೊನೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆ ಎಲ್ಲ ಮಕ್ಕಳನ್ನು ರಕ್ಷಿಸಿದ್ದರು. ಆದರೆ, ರೋಹಿತ್ ಆರ್ಯನ ಮೇಲೆ ಗುಂಡು ಹಾರಿಸಲಾಗಿದೆ. ಎನ್ಕೌಂಟರ್ನಲ್ಲಿ ಸಾವನ್ನಪ್ಪುವ ಮೂಲಕ ಈ ಕಿಡ್ನಾಪ್ ಡ್ರಾಮಾ ಅಂತ್ಯ ಕಂಡಿದೆ. ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಮುಂಬೈನ ಪೊವೈ […]

News

ತನ್ನ ಮಗನಿಗೆ ಉಪಮುಖ್ಯಮಂತ್ರಿಯವರ ಹೆಸರನ್ನೇ ಇಟ್ಟ ಕಾಂಗ್ರೆಸ್ ಶಾಸಕ: ಸ್ವತಃ ಡಿಕೆಶಿಯವರಿಂದಲೇ ಮಗುವಿಗೆ ನಾಮಕರಣ.

ಕುಡಚಿ ಕಾಂಗ್ರೆಸ್‌ ಶಾಸಕ ಮಹೇಂದ್ರ ತಮ್ಮಣ್ಣನವರ್ ತಮ್ಮ ಮಗನಿಗೆ ಡಿಕೆ ಶಿವಕುಮಾರ್ ಅವರಿಂದ ನಾಮಕರಣ ಮಾಡಿಸಿದ್ದು, ಮಗನಿಗೂ ʻಶಿವಕುಮಾರ್ʼ ಅಂತಲೇ ನಾಮಕರಣ ಮಾಡಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಅವರು ಪಾಪುವಿಗೆ ತಮ್ಮ ಹೆಸರನ್ನೇ ನಾಮಕಾರಣ ಮಾಡಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಚಿತ್ರವು ಕಾಂಗ್ರೆಸ್ ಅಭಿಮಾನಿಗಳ ಸಾಮಾಜಿಕ ತಾಣಗಳ ಪೇಜ್‌ಗಳಲ್ಲಿ ವೈರಲ್ ಆಗಿದೆ. ಮಗುವಿಗೆ ತಮ್ಮ ಹೆಸರು ಇಟ್ಟು ಮಗು ಶಿವಕುಮಾರ್ ಗೆ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಮನತುಂಬಿ ಹಾರೈಸಿದ್ದಾರೆ. ಈ ಬಗ್ಗೆ ಡಿಕೆ […]

News

ತೆಲಂಗಾಣ ಸರ್ಕಾರದಿಂದ ಮಹತ್ವದ ನಡೆ ,ಸಂಪುಟದ 16 ನೇ ಸಚಿವರಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪ್ರಮಾಣ ವಚನ ಸ್ವೀಕಾರ

ತೆಲಂಗಾಣ: ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು , ಮುಖ್ಯಮಂತ್ರಿಗಳು ಸೇರಿದಂತೆ ಹಲವು ನಾಯಕರ ಉಪಸ್ಥಿತಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ರವರು ತೆಲಂಗಾಣ ಸರ್ಕಾರದ ಹದಿನಾರನೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಸಮಾರಂಭದಲ್ಲಿ ರಾಜ್ಯಪಾಲರು ಪ್ರಮಾಣ ಬೋಧಿಸಿದರು. ಆದರೆ, ತಮ್ಮ ನೇಮಕವನ್ನು ಉಪಚುನಾವಣೆಗೆ ಜೋಡಿಸಿರುವ ಆರೋಪಗಳನ್ನು ಅಜರುದ್ದೀನ್ ತಳ್ಳಿಹಾಕಿದರು. ಪ್ರಮಾಣವಚನ ಸ್ವೀಕರಿಸಿದ ನಂತರ ಅವರು, “ನಾನು ಸಂತೋಷವಾಗಿದ್ದೇನೆ. ನನ್ನ ಪಕ್ಷದ ಹೈಕಮಾಂಡ್, ಜನತೆ ಮತ್ತು ನನ್ನ ಬೆಂಬಲಿಗರಿಗೆ ಧನ್ಯವಾದ ಹೇಳುತ್ತೇನೆ. ಇದು ಜುಬಿಲಿ ಉಪಚುನಾವಣೆಗೆ ಸಂಬಂಧಿಸಿದ್ದಲ್ಲ. […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft