Sports

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಘೋಷಣೆ:ಇಬ್ಬರು ವಿಕೆಟ್ ಕೀಪರ್

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯು ನಾಳೆಯಿಂದ (ನ.14) ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಅದರಂತೆ ಈ ಪಂದ್ಯದಲ್ಲಿ ಭಾರತದ ಪರ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯು ನಾಳೆಯಿಂದ (ನ.14) ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ […]

News

ಸಿದ್ದರಾಮಯ್ಯರ ದೆಹಲಿ ಭೇಟಿಗೂ ಮುನ್ನ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾದ ಸತೀಶ್ ಜಾರಕಿಹೊಳಿ!!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿಗೂ ಮುನ್ನ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ಸಂಜೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಮತ್ತು ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದರು. ಶುಕ್ರವಾರ ಸಿದ್ದರಾಮಯ್ಯ ಅವರ ಆಪ್ತ ಸತೀಶ್ ಅವರ ಭೇಟಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತ ಸಹಾಯಕರು ಎಂದು ಪರಿಗಣಿಸಲಾಗಿರುವುದರಿಂದ ಈ ಭೇಟಿ ಮಹತ್ವದ್ದಾಗಿದೆ. ನವೆಂಬರ್ 15 ರಂದು […]

ಸಿನಿಮಾ

ಶೂಟಿಂಗ್ ಪೂರ್ಣಗೊಳಿಸಿದ ‘ಮಾರ್ಕ್’; ಡಿಸೆಂಬರ್ 25ಕ್ಕೆ ರಿಲೀಸ್ ಫಿಕ್ಸ್

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಜುಲೈನಲ್ಲಿ ಪ್ರಾರಂಭವಾಗಿ ಕೇವಲ ನಾಲ್ಕು ತಿಂಗಳಿನಲ್ಲಿ ಶೂಟಿಂಗ್ ಪೂರ್ಣಗೊಳಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರ ಡಿಸೆಂಬರ್ 25ಕ್ಕೆ ಬಿಡುಗಡೆಯಾಗಲಿದೆ. ಟೀಸರ್‌ನಲ್ಲಿ ಸುದೀಪ್ ಆಕ್ಷನ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಇಷ್ಟು ವೇಗವಾಗಿ ಪೂರ್ಣಗೊಳಿಸಿದ ಮೊದಲ ಸಿನಿಮಾ. ಮಾರ್ಕ್’ ಸಿನಿಮಾ (Mark Movie) ಸೆಟ್ಟೇರಿದ್ದು ಜುಲೈನಲ್ಲಿ. ಕೇವಲ ನಾಲ್ಕೇ ತಿಂಗಳಲ್ಲಿ ಈ ಸಿನಿಮಾದ ಶೂಟ್​ನ ಸುದೀಪ್ ಪೂರ್ಣಗೊಳಿಸಿದ್ದಾರೆ. ಸದ್ಯ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿದ್ದು, […]

News

ಧರ್ಮಸ್ಥಳ ಪ್ರಕರಣ: ತನಿಖೆ ಮುಂದುವರಿಸಲು ಹಸಿರು ನಿಶಾನೆ ! ಹೈಕೋರ್ಟ್ ತಡೆಯಾಜ್ಞೆ ತೆರವು!

ಧರ್ಮಸ್ಥಳ ಟ್ರಸ್ಟ್ ಸಂಬಂಧಿತ ವಿವಾದಾತ್ಮಕ ಪ್ರಕರಣದಲ್ಲಿ ತನಿಖೆಯ ಮುಂದಿನ ಹಂತಗಳ ಮೇಲೆ ಹೇರಲಾಗಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ.ವಿಚಾರಣೆ ವೇಳೆ ಹೈಕೋರ್ಟ್ “ತನಿಖೆ ನಡೆಸುವುದು ಕಾನೂನು ಸುವ್ಯವಸ್ಥೆಯ ಭಾಗವಾಗಿದ್ದು, ಅದನ್ನು ಅಡ್ಡಿಪಡಿಸಲು ಸಾಧ್ಯವಿಲ್ಲ” ಎಂಬ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ.

News

ಐರನ್ ಮ್ಯಾನ್ 70.ಸ್ಪರ್ದೆಯಲ್ಲಿ ಗೆದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿ ನಾಯಕ ಕೆ . ಅಣ್ಣಾಮಲೈ!!

ಗೋವಾದಲ್ಲಿ ನಡೆದ ಐರನ್‌ 70.3 ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ, ಐರನ್‌ ಮ್ಯಾನ್‌ ಟ್ರಯಥ್ಲಾನ್ ನಲ್ಲಿ ಗೆದ್ದಿದ್ದಾರೆ.ಈ ಸ್ಪರ್ಧೆ ಸಮುದ್ರದಲ್ಲಿ 1.9 ಕಿಲೋಮೀಟರ್‌ ಈಜು, 90 ಕಿಮೀ ಸೈಕ್ಲಿಂಗ್‌, 21.1 ಕಿಮೀ ಓಟವನ್ನು ಒಳಗೊಂಡಿರುತ್ತದೆ. ಇವೆಲ್ಲವನ್ನು ಪೂರ್ಣಗೊಳಿಸಿದವರು ಮಾತ್ರ ಈ ಸ್ಪರ್ಧೆಯಲ್ಲಿ ಗೆಲ್ಲಲು ಅರ್ಹರಾಗಿರುತ್ತಾರೆ

Health +

ರಾತ್ರಿ ಮಲಗುವ ಮುನ್ನ ಈ ಒಂದು ಅಭ್ಯಾಸ ರೂಢಿಸಿಕೊಂಡರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೇ ಬರಲ್ಲ!

ಕೆಲವರು ಬೆಳಿಗ್ಗೆ ಹಣ್ಣುಗಳನ್ನು ತಿನ್ನುತ್ತಾರೆ, ಇನ್ನು ಕೆಲವರು ಸಂಜೆ ತಿನ್ನುತ್ತಾರೆ. ಈ ರೀತಿ ಪ್ರತಿನಿತ್ಯ ಒಂದಲ್ಲಾ ಒಂದು ಹಣ್ಣುಗಳನ್ನು ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲಿಯೂ ನಮ್ಮಲ್ಲಿಯೇ ಹೇರಳವಾಗಿ ಲಭ್ಯವಿರುವ ಪಪ್ಪಾಯಿ ಹಣ್ಣನ್ನು ಸೇವನೆ ಮಾಡುವುದು ದೇಹಕ್ಕೆ ಬಹಳ ಪ್ರಯೋಜನಕಾರಿ ಮಾತ್ರವಲ್ಲ, ಈ ಹಣ್ಣನ್ನು ಮಲಗುವ ಮುನ್ನ ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು. ಈ ಹಣ್ಣನ್ನು ರಾತ್ರಿ ತಿನ್ನುವುದೇ ಒಳ್ಳೆಯದು ಎನ್ನಲಾಗುತ್ತದೆ. ಹಾಗಾದರೆ ಯಾಕೆ ಮಲಗುವ ಮೊದಲು ಈ […]

News

ಬಾಡಿಗೆದಾರರು ಎಷ್ಟು ವರ್ಷ ಬಾಡಿಗೆ ನೀಡಿದರೂ ,ಆ ಮನೆಯ ಮಾಲಿಕರಾಗಲು ಸಾಧ್ಯವಿಲ್ಲ!! : ಸುಪ್ರೀಂ ಕೋರ್ಟ್.

ನವದೆಹಲಿ, ನವೆಂಬರ್ 12: ಭಾರತದ ಸುಪ್ರೀಂ ಕೋರ್ಟ್ ಬಾಡಿಗೆದಾರರು ಮತ್ತು ಆಸ್ತಿ ಮಾಲೀಕರ ಹಕ್ಕುಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ. ಈ ತೀರ್ಪಿನ ಪ್ರಕಾರ, ಯಾವುದೇ ಬಾಡಿಗೆದಾರನಿಗೂ ಆ ಆಸ್ತಿಯ ಮಾಲೀಕತ್ವವನ್ನು ಕಾನೂನುಬದ್ಧವಾಗಿ ಹಕ್ಕು ಹೇಳುವ ಅಧಿಕಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮಹಾರಾಷ್ಟ್ರದ ಪುಣೆಯೊಂದರ ಬಾಡಿಗೆ ವಿವಾದ ಪ್ರಕರಣದ ವಿಚಾರಣೆಯ ವೇಳೆ ಈ ತೀರ್ಪು ಹೊರಬಿದ್ದಿದೆ. ಪ್ರಕರಣದಲ್ಲಿ ಬಾಡಿಗೆದಾರನು ಹಲವು ವರ್ಷಗಳಿಂದ ಆ ಮನೆಯಲ್ಲಿ ವಾಸಿಸುತ್ತಿದ್ದ ಹಿನ್ನೆಲೆ ಆಸ್ತಿಯ ಮಾಲೀಕತ್ವವನ್ನು ತನ್ನದಾಗಿ ಘೋಷಿಸಲು ಕೋರಿದ್ದ. ಆದರೆ ನ್ಯಾಯಾಲಯವು […]

Business GULF

ಭಾರತ-ಗಲ್ಫ್ ಬಾಂಧವ್ಯ ಹೊಸ ಹಂತಕ್ಕೆ! , ಸೌದಿ, ಇರಾಕ್ ಮತ್ತು ಕುವೈತ್ ದೇಶಗಳಿಂದ ಭಾರತದತ್ತ ಕಚ್ಚಾ ತೈಲ ಪೂರೈಕೆ ಹೆಚ್ಚಳ !

ನವದೆಹಲಿ/ರಿಯಾದ್, ನವೆಂಬರ್ 12: ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಆರ್ಥಿಕ ಹಾಗೂ ಇಂಧನ ಸಂಬಂಧಗಳು ಮತ್ತೊಂದು ಹೊಸ ಹಂತವನ್ನು ಪ್ರವೇಶಿಸಿವೆ. ಸೌದಿ ಅರೇಬಿಯಾ, ಇರಾಕ್ ಮತ್ತು ಕುವೈಟ್ ರಾಷ್ಟ್ರಗಳು ಡಿಸೆಂಬರ್ 2025ರಿಂದ ಭಾರತೀಯ ಶುದ್ಧೀಕರಣ ಸಂಸ್ಥೆಗಳಿಗೆ (refineries) ಹೆಚ್ಚುವರಿ ಪ್ರಮಾಣದ ಕಚ್ಚಾ ತೈಲ (crude oil) ಪೂರೈಕೆ ನೀಡಲು ನಿರ್ಧರಿಸಿರುವುದು ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿದೆ. ಎಣ್ಣೆ ಮಾರುಕಟ್ಟೆಯಲ್ಲಿ ಹೊಸ ತಂತ್ರ ರಷ್ಯಾದಲ್ಲಿ ಮೇಲಿನ ಪಾಶ್ಚಾತ್ಯ ರಾಷ್ಟ್ರಗಳ ನಿಷೇಧದ ಪರಿಣಾಮವಾಗಿ ಭಾರತಕ್ಕೆ ರಷ್ಯಾದ ಕಚ್ಚಾ ತೈಲದ […]

ಸಿನಿಮಾ

ಮೂರು ಕನ್ನಡ ಚಿತ್ರಗಳಿಗೆ ಅಂತರಾಷ್ಟ್ರೀಯ ಮೆಚ್ಚುಗೆ – 56ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಇಂಡಿಯನ್ ಪ್ಯಾನೋರಮಾ” ವಿಭಾಗಕ್ಕೆ ಆಯ್ಕೆ !!

ಪಣಜೀ (ಗೋವಾ): ಕರ್ನಾಟಕದ ಚಲನಚಿತ್ರರಂಗಕ್ಕೆ ಮತ್ತೊಮ್ಮೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಗೌರವ ದೊರೆತಿದೆ. 56ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (IFFI–2025)ದಲ್ಲಿ ಪ್ರದರ್ಶನಗೊಳ್ಳಲಿರುವ ಇಂಡಿಯನ್ ಪ್ಯಾನೋರಮಾ – ಫೀಚರ್ ಫಿಲ್ಮ್ ವಿಭಾಗಕ್ಕೆ ಮೂರು ಕನ್ನಡ ಚಿತ್ರಗಳು ಆಯ್ಕೆಯಾಗಿವೆ. ಈ ಚಿತ್ರಗಳೆಂದರೆ — “Su From So”, “Vanya” ಹಾಗೂ “Chikka”. ಈ ಮೂವತ್ತು ಚಿತ್ರಗಳು ವಿಷಯ ವೈವಿಧ್ಯತೆ, ತಾಂತ್ರಿಕ ಕೌಶಲ್ಯ ಹಾಗೂ ಭಾವನಾತ್ಮಕ ಗಂಭೀರತೆಯ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆದಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.ಚಿತ್ರಮಂದಿರದ ವ್ಯಾಪ್ತಿಯನ್ನು ಮೀರಿ […]

News

ತ್ಯಾಜ್ಯ ನಿರ್ವಹಣೆಯನ್ನು ನಿಭಾಯಿಸಲು ತಂತ್ರಜ್ಞಾನ ಆಧಾರಿತ ವಿಧಾನದ ಮಾರ್ಗಸೂಚಿಯನ್ನು ರೂಪಿಸಿದ ಕರ್ನಾಟಕ ಹೈಕೋರ್ಟ್!

ಬೆಂಗಳೂರು. ನವೆಂಬರ್ 12: ಇತ್ತೀಚೆಗೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಅನಧಿಕೃತ ತ್ಯಾಜ್ಯ ಸುರಿಯುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವಿದೆ ಎಂದು ಗಮನಿಸಿದ್ದರು. “ಘನತ್ಯಾಜ್ಯ ನಿರ್ವಹಣೆಯು ಕೇವಲ ಪುರಸಭೆಯ ನಿಗಮಗಳ ಶಾಸನಬದ್ಧ ಕರ್ತವ್ಯವಲ್ಲ, ಬದಲಾಗಿ ಭಾರತದ ಸಂವಿಧಾನದ ಇಪ್ಪತ್ತೊಂದನೆಯ ವಿಧಿಯ ಅಡಿಯಲ್ಲಿ ಬದುಕುವ ಮೂಲಭೂತ ಹಕ್ಕಿಗೆ ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿರುವ ಆಳವಾದ ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂದು ಈ ನ್ಯಾಯಾಲಯವು ಪರಿಗಣಿತ ಅಭಿಪ್ರಾಯವನ್ನು ಹೊಂದಿದೆ. ಪರಿಸರದ ಸ್ವಚ್ಛ, ನೈರ್ಮಲ್ಯ ಇತ್ಯಾದಿಗಳು ಪರಿಸರದ ಹಕ್ಕು ನೀಡಬೇಕಾದ ಸವಲತ್ತು ಅಲ್ಲ, ಆದರೆ ಜಾರಿಗೊಳಿಸಬೇಕಾದ ಹಕ್ಕು ” […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft