Technology

ಬಂಗಾಳ ಕೊಲ್ಲಿಯಲ್ಲಿ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ: ಭಾರತದ ರಕ್ಷಣಾ ಬಲ ವೃದ್ಧಿ

ಭಾರತವು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಇಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಅಣುಶಕ್ತಿ ಚಾಲಿತ ಸಬ್‌ಮರಿನ್‌ನಿಂದ ಉಡಾವಣೆ ಮಾಡಬಲ್ಲ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಬಂಗಾಳ ಕೊಲ್ಲಿಯಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಈ ಅತ್ಯಾಧುನಿಕ ಕ್ಷಿಪಣಿಯು ಸುಮಾರು 3,500 ಕಿಲೋಮೀಟರ್ ದೂರದಲ್ಲಿರುವ ಗುರಿಯನ್ನು ಅತ್ಯಂತ ನಿಖರವಾಗಿ ಧ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜಲಗರ್ಭದ ಆಳದಿಂದ ನಡೆಸಲಾದ ಈ ಉಡಾವಣೆಯು ಕ್ಷಿಪಣಿಯ ತಾಂತ್ರಿಕ ಸಾಮರ್ಥ್ಯ ಮತ್ತು ನಿಖರತೆಯನ್ನು ಸಾಬೀತುಪಡಿಸಿದ್ದು, ಭಾರತದ ಸಮರ ಸನ್ನದ್ಧತೆಗೆ ಹೊಸ ಆಯಾಮವನ್ನು ನೀಡಿದೆ. […]

News

ದೇಶದಲ್ಲಿ ಹೆಚ್ಚಿದ ಟೈಗರ್ ಡೆತ್: 2025ರಲ್ಲಿ 166 ಹುಲಿಗಳ ಸಾವು!

​ನವದೆಹಲಿ: ಭಾರತದ ಹೆಮ್ಮೆಯ ಸಂಕೇತವಾದ ಹುಲಿಗಳ ಸಂರಕ್ಷಣೆಯಲ್ಲಿ ಹಿನ್ನಡೆಯಾಗಿದೆಯೇ ಎಂಬ ಪ್ರಶ್ನೆ ಈಗ ಕಾಡತೊಡಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 2025ನೇ ಸಾಲಿನಲ್ಲಿ ದೇಶಾದ್ಯಂತ ಒಟ್ಟು 166 ಹುಲಿಗಳು ಸಾವನ್ನಪ್ಪಿವೆ. ಇದು ಪರಿಸರ ಪ್ರೇಮಿಗಳು ಮತ್ತು ವನ್ಯಜೀವಿ ತಜ್ಞರಲ್ಲಿ ತೀವ್ರ ಆತಂಕ ಮೂಡಿಸಿದೆ. ​ಸಾವಿಗೆ ಪ್ರಮುಖ ಕಾರಣಗಳೇನು? ​ವರದಿಯ ಪ್ರಕಾರ, ಹುಲಿಗಳ ಸಾವಿಗೆ ಕೇವಲ ವಯೋಸಹಜ ಕಾರಣಗಳಲ್ಲದೆ, ವಿವಿಧ ಮಾನವ ನಿರ್ಮಿತ ಮತ್ತು ನೈಸರ್ಗಿಕ ಸವಾಲುಗಳು ಕಾರಣವಾಗಿವೆ: […]

News

ಕೇರಳ :ಕೆಎಸ್ಆರ್ಟಿಸಿ ಬಸ್ ಕೆ ಬೆಂಕಿ ಸಂಪೂರ್ಣವಾಗಿ ಸುಟ್ಟು ಭಸ್ಮ! ಪ್ರಯಾಣಿಕರು ಪಾರು!

ಬೆಂಗಳೂರು : ಕೇರಳ :ಕೆಎಸ್ಆರ್ಟಿಸಿ ಬಸ್ ಕೆ ಬೆಂಕಿ ಸಂಪೂರ್ಣವಾಗಿ ಸುಟ್ಟು ಭಸ್ಮ! ಪ್ರಯಾಣಿಕರು ಪಾರು! ಕೇರಳದ ಕೊಟ್ಟಾಯಂನಲ್ಲಿ ಪ್ರವಾಸಿಗರೊಂದಿಗೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬೆಂಕಿ ಹತ್ತಿಕೊಂಡು ಕ್ಷಣಗಳಲ್ಲಿ ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಸಂಭವಿಸಿ ಪ್ರಯಾಣಿಕರು ಸಮಯಕ್ಕೆ ಇಳಿದು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ

News

ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್:‌ ಟಿಕೆಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಘೋಷಿಸಿದ ಇಲಾಖೆ!

ಬೆಂಗಳೂರು : ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್:‌ ಟಿಕೆಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಘೋಷಿಸಿದ ಇಲಾಖೆ! ಸಾಮಾನ್ಯ ಟಿಕೆಟ್ ಖರೀದಿಸಿ ಡಿಜಿಟಲ್ ಪಾವತಿ ಮಾಡಿದರೆ ಭರ್ಜರಿ ಡಿಸ್ಕೌಂಟ್‌ ಸಿಗಲಿದೆ. ರೈಲ್‌ಒನ್ ಅಪ್ಲಿಕೇಶನ್ ಮೂಲಕ ಕಾಯ್ದಿರಿಸದ ಟಿಕೆಟ್‌ಗಳ ಖರೀದಿಗೆ ಶೇ.3ರಷ್ಟು ನೇರ ರಿಯಾಯಿತಿ ನೀಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಈ ವಿಶೇಷ ಕೊಡುಗೆ ಜನವರಿ 14, 2026ರಿಂದ ಜುಲೈ 14, 2026ರವರೆಗೆ ಮಾನ್ಯವಾಗಿರುತ್ತದೆ.

Business GULF

ಭಾರತಕ್ಕೆ ಹರಿದುಬಂದ ದಾಖಲೆಯ 135 ಬಿಲಿಯನ್ ಡಾಲರ್ ವಿದೇಶಿ ಹಣ: ಅನಿವಾಸಿ ಭಾರತೀಯರ ಕೊಡುಗೆಗೆ ಶ್ಲಾಘನೆ

ಗಲ್ಫ್ – ಇಂಡಿಯಾ : 2024-25ರ ಹಣಕಾಸು ವರ್ಷದಲ್ಲಿ ಭಾರತವು ವಿದೇಶಿ ಹಣ ರವಾನೆಯಲ್ಲಿ ಜಾಗತಿಕ ಮಟ್ಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, ಒಟ್ಟು 135 ಬಿಲಿಯನ್ ಡಾಲರ್ ವಿದೇಶಿ ಹಣವನ್ನು ಸ್ವೀಕರಿಸಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಈ ಬೃಹತ್ ಮೊತ್ತದ ಹಣ ಹರಿವಿನಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಪಾಲು ಅತ್ಯಂತ ದೊಡ್ಡದಾಗಿದ್ದು, ದೇಶದ ಆರ್ಥಿಕ ಸ್ಥಿರತೆಗೆ ಇದು ದೊಡ್ಡ ಬಲ ನೀಡಿದೆ. ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಅನಿವಾಸಿ ಭಾರತೀಯರು ಕಳುಹಿಸುತ್ತಿರುವ ಈ […]

ಸಿನಿಮಾ

ಬಾಕ್ಸ್ ಆಫೀಸ್‌ನಲ್ಲಿ ಕಿಚ್ಚ ಸುದೀಪ್‌ ಅವರ ‘ಮಾರ್ಕ್‌’ ಅಬ್ಬರ; ಆರು ದಿನಗಳಲ್ಲಿ 20 ಕೋಟಿಗೂ ಅಧಿಕ ಗಳಿಕೆ.

ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ‘ಮಾರ್ಕ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರ ಮನ ಗೆದ್ದಿರುವ ಈ ಚಿತ್ರವು ಕೇವಲ ಆರು ದಿನಗಳಲ್ಲಿ ಭರ್ಜರಿ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ. ಕಳೆದ ಶುಕ್ರವಾರ ತೆರೆಕಂಡ ‘ಮಾರ್ಕ್’, ಆರು ದಿನಗಳ ಅವಧಿಯಲ್ಲಿ ಒಟ್ಟು 20.45 ಕೋಟಿ ರೂಪಾಯಿ ಗಳಿಸುವ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಾರದ ದಿನಗಳಲ್ಲಿ ಗಳಿಕೆಯಲ್ಲಿ ಸಾಧಾರಣ ಇಳಿಕೆ ಕಂಡುಬಂದರೂ, ಚಿತ್ರದ […]

Sports

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತೀಯ ಮಹಿಳಾ ತಂಡಕ್ಕೆ 5-0 ಅಂತರದ ಭರ್ಜರಿ ಕ್ಲೀನ್ ಸ್ವೀಪ್ ಗೆಲುವು; ಶಫಾಲಿ ವರ್ಮಾ ಹೊಸ ದಾಖಲೆ!

ಬೆಂಗಳೂರು: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ತನ್ನ ಅಪ್ರತಿಮ ಪ್ರದರ್ಶನವನ್ನು ಮುಂದುವರಿಸಿದ್ದು, ಆತಿಥೇಯ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 5-0 ಅಂತರದಿಂದ ಸಂಪೂರ್ಣವಾಗಿ ತನ್ನದಾಗಿಸಿಕೊಂಡಿದೆ. ಇಂದು ನಡೆದ ರೋಚಕ ಅಂತಿಮ ಪಂದ್ಯದಲ್ಲಿ ಭಾರತ ತಂಡ 15 ರನ್‌ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಿಗದಿತ ಓವರ್‌ಗಳಲ್ಲಿ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft