ಸಿನಿಮಾ

ಬಿಡುಗಡೆಯ ಮೊದಲ ದಿನವೇ ಪ್ರೇಕ್ಷಕರ ಗಮನ ಸೆಳೆದ “ಗತವೈಭವ” ಚಿತ್ರ, ಎಲ್ಲೆಡೆ “ಗತವೈಭವ”ದ ವೈಭವ !!

ಬೆಂಗಳೂರು , ನವೆಂಬರ್ 14: ಗತವೈಭವ ಸಿನಿಮಾ ಇಂದು ಪ್ರೇಕ್ಷಕರ ಮುಂದೆ ತೆರೆ ಕಂಡಿದ್ದು, ಬಿಡುಗಡೆಯ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸಿದೆ. ಬೆಳಗಿನ ಶೋಗಳಿಂದಲೇ ಚಿತ್ರಮಂದಿರಗಳಲ್ಲಿ ಕುತೂಹಲದ ವಾತಾವರಣ ನಿರ್ಮಾಣವಾಗಿತ್ತು. ಮೊದಲ ಪ್ರದರ್ಶನ ವೀಕ್ಷಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಚಿತ್ರದ ವಿಷಯ, ನಿರ್ದೇಶನ ಮತ್ತು ನಟರ ಅಭಿನಯವನ್ನು ಮೆಚ್ಚಿದ್ದಾರೆ. ವೈವಿಧ್ಯಮಯ ಕಥಾಹಂದರ, ಗಟ್ಟಿಯಾದ ಭಾವನಾತ್ಮಕ ಬಿಂಬನೆ ಹಾಗೂ ಮನಸೂರೆಗೊಂಡಿರುವ ತಾಂತ್ರಿಕ ಕೌಶಲ್ಯದಲ್ಲಿ ಸಿನಿಮಾ ತನ್ನದೇ ಛಾಪು ಮೂಡಿಸಿದೆ ಎಂದು ಪ್ರೇಕ್ಷಕರ ಅಭಿಪ್ರಾಯ. […]

GULF

ಯುಎಇ–ಜಿಸಿಸಿ ದೇಶಗಳಲ್ಲಿರುವ ಭಾರತೀಯ ಶಾಲೆಗಳಿಗೆ ಹೊಸ CBSE ಗ್ಲೋಬಲ್ ಪಠ್ಯಕ್ರಮ: 2026ರಿಂದ ಜಾರಿಗೆ !

ಯುಎಇ , ಇಂಡಿಯನ್. ನವೆಂಬರ್ 14 :ಗಲ್ಫ್ ಪ್ರದೇಶದಲ್ಲಿರುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳ ಶಿಕ್ಷಣ ವಲಯದಲ್ಲಿ ಮಹತ್ತರ ಬದಲಾವಣೆಗೆ CBSE ಮುಂದಾಗಿದೆ. 2026ರ ಏಪ್ರಿಲ್‍ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಹಾಗೂ ಇತರೆ ಗಲ್ಫ್ ಸಹಕಾರ ಪರಿಷತ್ (GCC) ದೇಶಗಳಲ್ಲಿನ ಎಲ್ಲಾ CBSE ಶಾಲೆಗಳು “CBSE Global Curriculum” ಅನುಸರಿಸಬೇಕಾಗಿದೆ ಎಂದು ಕೇಂದ್ರ ಶಿಕ್ಷಣ ಮಂಡಳಿ ಘೋಷಿಸಿದೆ. ಹೊಸ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಶಿಕ್ಷಣವನ್ನು ನೀಡುವ ಉದ್ದೇಶ ಹೊಂದಿದ್ದು, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪಾಠ್ಯಕ್ರಮ […]

News

ಬಿಹಾರ ವಿಧಾನಸಭಾ ಚುನಾವಣೆ: ಭರ್ಜರಿ ಜಯದತ್ತ ಬಿಜೆಪಿ!!

ಬಿಹಾರ , ನವೆಂಬರ್ 14 :ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಇಂದು ಘೋಷಿತವಾಗುತ್ತಲೇ ರಾಜ್ಯದ ರಾಜಕೀಯ ವಾತಾವರಣದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಭರ್ಜರಿ ಗೆಲುವಿನ ದಾಖಲೆಯೊಂದಿಗೆ ಅಧಿಕಾರದತ್ತ ಧೃಡವಾಗಿ ಹೆಜ್ಜೆ ಇಟ್ಟಿದೆ. ಆರಂಭಿಕ ಲೆಕ್ಕಾಚಾರದಿಂದಲೇ ಸ್ಪಷ್ಟವಾಗಿದ್ದ ಮುನ್ನಡೆ ಕೊನೆಯ ಘಟ್ಟದಲ್ಲೂ ಮುಂದುವರಿಯುತ್ತಾ, ಎನ್‌ಡಿಎ 200ಕ್ಕೂ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಕಳೆದ ಕೆಲ ವಾರಗಳಿಂದ ನಡೆದ ಬಿರುಸಿನ ಪ್ರಚಾರ, ಪ್ರಧಾನಮಂತ್ರಿ ನರೇಂದ್ರ ಮೋದಿಯ ಬೃಹತ್ ರ್ಯಾಲಿಗಳು ಮತ್ತು ಸ್ಥಳೀಯ ಮಟ್ಟದಲ್ಲಿ ನೀಡಲಾಗಿದ್ದ ಅಭಿವೃದ್ಧಿ […]

News

ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕಕ್ಕೆ ಮಾತ್ರವಲ್ಲ ತಮಿಳುನಾಡು, ಪುದುಚೆರಿಗೂ ಸಂದ ಜಯ : ಡಿ.ಕೆ.ಶಿವಕುಮಾರ್ !

ಮೇಕೆದಾಟು ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಉಪಯೋಗವಾಗಲಿದೆ. ಕಷ್ಟ ಕಾಲದಲ್ಲಿ ಅವರ ಪಾಲಿನ ನೀರನ್ನು ಬಿಡಲು ಈ ಯೋಜನೆ ನೆರವಾಗಲಿದೆ. ಹೀಗಾಗಿ, ಸುಪ್ರೀಂ ಕೋರ್ಟಿನ ತೀರ್ಪು ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡು, ಪುದುಚೆರಿಗೂ ಸಂದ ಜಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

News

385 ಮರಗಳು ತಮ್ಮ ತಾಯಿಯನ್ನು ಕಳೆದುಕೊಂಡಿತು: ಪದ್ಮಶ್ರೀ ಪುರಸ್ಕೃತೆ ‘ಸಾಲುಮರದ’ ತಿಮ್ಮಕ್ಕ ಇನ್ನಿಲ್ಲ !!

ಬೆಂಗಳೂರು , ನವೆಂಬರ್ 14 :ಪರಿಸರವಾದಿ ಹಾಗೂ ಪದ್ಮಶ್ರೀ ಪುರಸ್ಕೃತೆ ‘ಸಾಲುಮರದ’ ತಿಮ್ಮಕ್ಕ ಅವರು ಇಂದು ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ತಮ್ಮ ದಿವಂಗತ ಪತಿಯೊಂದಿಗೆ, ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಆಲದ ಮರಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ, ಇದಕ್ಕಾಗಿ ಅವರಿಗೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ತಿಮ್ಮಕ್ಕ ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರು. ಬಿಕ್ಕಳ ಚಿಕ್ಕಯ್ಯ ಅವರನ್ನು ಮದುವೆಯಾದ ನಂತರ, ಅವರು ಮಾಗಡಿ ತಾಲ್ಲೂಕಿನ ಹುಲಿಕಲ್ […]

News

ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ವಿಧಿವಶ

ಬೆಂಗಳೂರು: ರಸ್ತೆ ಬದಿಯಲ್ಲಿ ಮರಗಳನ್ನು ನೆಡುತ್ತಲೇ ಖ್ಯಾತಿಯಾಗಿದ್ದ ಸಾಲುಮರದ ತಿಮಕ್ಕ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 1911 ಜೂನ್‌ 30ರಂದು ಜನಿಸಿದ್ದ ಅವರು, ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿದ್ದರು. ಮರ, ಗಿಡಗಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಸುತ್ತಿದ್ದರು. ತಿಮ್ಮಕ್ಕ ಅವರಿಗೆ 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, 2019ರಲ್ಲಿ ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

News

ವಿಕೋಪಕ್ಕೆ ತಿರುಗಿದ ಬಾಗಲಕೋಟೆಯ ಕಬ್ಬು ಬೆಳೆಗಾರರ ಹೋರಾಟ!!140 ಕ್ಕೂ ಹೆಚ್ಚು ಕಬ್ಬಿನ ಟ್ರಾಕ್ಟರ್‌ಗಳಿಗೆ ಬೆಂಕಿ !!

ಪ್ರತಿ ಟನ್ ಕಬ್ಬಿಗೆ 3500 ರೂ ದರ ನೀಡುವಂತೆ ರೈತರು ನಡೆಸುತ್ತಿರುವ ಹೋರಾಟ ಗುರುವಾರ ರಾತ್ರಿ ವಿಕೋಪಕ್ಕೆ ತಿರುಗಿದೆ ರೈತರ ಖಡಕ್ ಎಚ್ಚರಿಕೆಯ ಬಗ್ಗೆ ಮಧ್ಯೆಯೂ ಕಬ್ಬು ನುರಿಸಲು ಆರಂಭಿಸಿದ ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಕಾರ್ಖಾನೆಯ ಆವರಣದಲ್ಲಿದ್ದ 140 ಕ್ಕೂ ಹೆಚ್ಚಿನ ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Technology

ಫಾಸ್ಟ್ ಚಾರ್ಜರ್ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತೇ?, ಇದು ಫೋನ್ ಸ್ಫೋಟಕ್ಕೆ ಕಾರಣವಾಗುತ್ತಾ?

ನೀವು ಎಂದಾದರೂ 18W ಚಾರ್ಜಿಂಗ್ ಅನ್ನು ಬೆಂಬಲಿಸುವ ನಿಮ್ಮ ಫೋನ್ ಅನ್ನು 100W ಅಥವಾ 120W ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಿದ್ದೀರಾ? ಹಾಗೆ ಮಾಡುವುದರಿಂದ ನಿಮ್ಮ ಫೋನ್‌ನ ಬ್ಯಾಟರಿ ಸ್ಫೋಟಗೊಳ್ಳಬಹುದೇ? ಆಧುನಿಕ ಚಾರ್ಜರ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ನೋಡಿ ಬೆಂಗಳೂರು (ನ. 14): ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಿ ಹೆಚ್ಚಿನ ಶಕ್ತಿಯ ಚಾರ್ಜರ್‌ಗೆ ಸಂಪರ್ಕಿಸಬೇಕಾದ ಅಗತ್ಯ ನಿಮಗೆ ಎಂದಾದರೂ ಬಂದಿದೆಯೇ?. ವೇಗದ ಚಾರ್ಜರ್ (Fast Charger) ನಿಮ್ಮ ಫೋನ್ ಸ್ಫೋಟಗೊಳ್ಳಲು […]

News

ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ, ರಾಘೋಪುರ್‌ನಲ್ಲಿ ತೇಜಸ್ವಿ ಯಾದವ್ ಮುನ್ನಡೆ

Bihar Assembly Election Results 2025 LIVE Counting and Updates in Kannada: ಬಿಹಾರಕ್ಕೆ ಇಂದು ನಿರ್ಣಾಯಕ ದಿನ, ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಕಾದು ನೋಡಬೇಕಿದೆ. 243 ಸ್ಥಾನಗಳ ಎರಡು ಹಂತಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ 46 ಮತಗಟ್ಟೆಗಳಲ್ಲಿ ಪ್ರಾರಂಭವಾಗಲಿದೆ. ನಿತೀಶ್ ಕುಮಾರ್ ಒಂದೆಡೆ ವಿಜಯವನ್ನು ಘೋಷಿಸಿದ್ದರೆ, ಮತ್ತೊಂದೆಡೆ ತೇಜಸ್ವಿ ಯಾದವ್ ಕೂಡ ನವೆಂಬರ್ 18 ರಂದು ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿಕೊಂಡಿದ್ದಾರೆ. […]

Business

ಬೆಂಗಳೂರಿನಲ್ಲಿ ಉದ್ಘಾಟನೆಗೊಂಡ “ಡ್ರೀಮ್ ಡೀಲ್ ಗ್ರೂಪ್” ಇದರ ವಿನೂತನವಾದ ಕೇಂದ್ರ ಕಛೇರಿ !!

ಬೆಂಗಳೂರು, ನವೆಂಬರ್ 13: ಬೆಂಗಳೂರಿನ ದೊಮ್ಮಲೂರಿನಲ್ಲಿ ನೂತನವಾಗಿ ನಿರ್ಮಿಸಲಾದ ಡ್ರೀಮ್ ಡೀಲ್ ಗ್ರೂಪ್‌ ಕಾರ್ಪೊರೇಟ್ ಕಛೇರಿಯನ್ನು 14-11-25 ಗುರುವಾರದಂದು, ಸಂಸ್ಥೆಯ ಎಮ್ ಡಿ ಮುಹಮ್ಮದ್ ಸುಹೈಲ್ ರವರು ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಡ್ರೀಮ್ ಡೀಲ್ ಸಂಸ್ಥೆಯ ಡೈರೆಕ್ಟರ್‌ಗಳು ಹಾಗೂ ಹಲವು ಸಾಮಾಜಿಕ ನಾಯಕರ ಉಪಸ್ಥಿತರಿದ್ದರು. ದೊಮ್ಮಲೂರಿನ ಖ್ಯಾತ ಐಟಿ ಕಂಪನಿಗಳ ನಡುವೆ ಡ್ರೀಮ್ ಡೀಲ್ ಗ್ರೂಪ್‌ನ ನಾಲ್ಕು ಅಂತಸ್ತಿನ ಭವ್ಯ ಕಟ್ಟಡವು ತಲೆಯೆತ್ತಿದೆ .ಡ್ರೀಮ್ ಡೀಲ್ ಆಫೀಸ್ , ಡ್ರೀಮ್ ಡೀಲ್ ಫರ್ನಿಚರ್ಸ್ & ಇಲೆಕ್ಟ್ರಾನಿಕ್ಸ್ ಶೋ […]

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft