Sports

IND vs SA: ಟಿ20 ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಬಿಗ್ ಶಾಕ್ ನೀಡಿದ ಐಸಿಸಿ

ICC Fines India: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಓವರ್ ದರಕ್ಕಾಗಿ ಭಾರತ ಕ್ರಿಕೆಟ್ ತಂಡಕ್ಕೆ ಐಸಿಸಿ ದಂಡ ವಿಧಿಸಿದೆ. ನಿಗದಿತ ಸಮಯಕ್ಕಿಂತ ಎರಡು ಓವರ್ ಕಡಿಮೆ ಬೌಲಿಂಗ್ ಮಾಡಿದ್ದಕ್ಕೆ ಕೆ.ಎಲ್. ರಾಹುಲ್ ನಾಯಕತ್ವದ ತಂಡವು ತನ್ನ ಪಂದ್ಯ ಶುಲ್ಕದ 10% ಕಡಿತವನ್ನು ಎದುರಿಸಿದೆ. ನಾಯಕ ರಾಹುಲ್ ದಂಡವನ್ನು ಒಪ್ಪಿಕೊಂಡಿದ್ದು, ಇದು ಭವಿಷ್ಯದ ಪಂದ್ಯಗಳಿಗೆ ಎಚ್ಚರಿಕೆಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಗೆದ್ದ ಖುಷಿಯಲ್ಲಿದ್ದ ಭಾರತ ಕ್ರಿಕೆಟ್ ತಂಡಕ್ಕೆ ( India vs South Africa) ದೊಡ್ಡ ಆಘಾತ ಎದುರಾಗಿದೆ. ವಾಸ್ತವವಾಗಿ ಐಸಿಸಿ (ICC), ನಿಧಾನಗತಿಯ ಓವರ್ ದರ ನಿಯಮವನ್ನು ಉಲ್ಲಂಘಿಸಿರುವ ಟೀಂ ಇಂಡಿಯಾಕ್ಕೆ ಶಿಕ್ಷೆ ವಿಧಿಸಿದೆ. ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಲೋ ಓವರ್ ರೇಟ್ ನಿಯಮವನ್ನು ಮುರಿದಿದ್ದು, ಈ ತಪ್ಪಿಗಾಗಿ ಐಸಿಸಿ ಶಿಕ್ಷೆ ವಿಧಿಸಿದೆ. ರಾಯ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India) 358 ರನ್ ಬಾರಿಸಿಯೂ ಸೋತಿತ್ತು. ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ನಿಗಧಿತ ಸಮಯಕ್ಕೆ ಓವರ್​ಗಳನ್ನು ಪೂರ್ಣಗೊಳಿಸಿರಲಿಲ್ಲ. ಪರಿಣಾಮವಾಗಿ, ಐಸಿಸಿ ಈಗ ಟೀಂ ಇಂಡಿಯಾಗೆ ದಂಡ ವಿಧಿಸಿದ್ದು, ಪಂದ್ಯ ಶುಲ್ಕದ ಶೇಕಡಾ 10 ರಷ್ಟು ಮೊತ್ತವನ್ನು ಕಡಿತಗೊಳಿಸಿದೆ.

ನಿಗಧಿತ ಸಮಯಕ್ಕೆ ಮುಗಿಯದ ಓವರ್​ಗಳು

ಟೀಂ ಇಂಡಿಯಾ ನಿಗಧಿತ ಸಮಯಕ್ಕಿಂತ ಎರಡು ಓವರ್ ಕಡಿಮೆ ಬೌಲಿಂಗ್ ಮಾಡಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದ ಕಾರಣ, ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಟೀಂ ಇಂಡಿಯಾಕ್ಕೆ ಈ ದಂಡ ವಿಧಿಸಿದ್ದಾರೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ಭಾರತೀಯ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ಐಸಿಸಿ ನಿಯಮಗಳ ಪ್ರಕಾರ, ಆಟಗಾರನು ನಿಗದಿತ ಸಮಯದೊಳಗೆ ಬೌಲಿಂಗ್ ಮಾಡಲು ವಿಫಲವಾದರೆ, ಪ್ರತಿ ಓವರ್‌ಗೆ ಅವರ ಪಂದ್ಯ ಶುಲ್ಕದ ಐದು ಪ್ರತಿಶತದಷ್ಟು ದಂಡ ವಿಧಿಸಲಾಗುತ್ತದೆ. ನಾಯಕ ಕೆ.ಎಲ್. ರಾಹುಲ್ ಆರೋಪ ಮತ್ತು ದಂಡವನ್ನು ಒಪ್ಪಿಕೊಂಡಿರುವುದರಿಂದ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.

ಟಿ20 ಸರಣಿ ಆರಂಭ

ರಾಂಚಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡವು ಮಾಡಿದ ತಪ್ಪಿಗೆ ಪ್ರತಿಯಾಗಿ, ನಿಧಾನಗತಿಯ ಓವರ್ ದರಕ್ಕೂ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ನಿಧಾನಗತಿಯ ಓವರ್ ದರದಿಂದಾಗಿ, ಅಂತಿಮ ಓವರ್‌ನಲ್ಲಿ ಭಾರತ ತಂಡವು ಹೆಚ್ಚುವರಿ ಫೀಲ್ಡರ್ ಅನ್ನು ಒಳಕ್ಕೆ ತರಬೇಕಾಯಿತು. ಟಿ20 ಸರಣಿಯಲ್ಲಿ ಇದು ಮತ್ತೆ ಸಂಭವಿಸಿದರೆ, ಅದು ದುಬಾರಿಯಾಗಬಹುದು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಕಟಕ್‌ನಲ್ಲಿ ನಡೆಯಲಿದೆ. ಸರಣಿಯು ಐದು ಪಂದ್ಯಗಳ ಸರಣಿಯಾಗಿದೆ. ಕಳೆದ ಸರಣಿಯಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ತಮ್ಮ ತವರು ನೆಲದಲ್ಲಿ 3-1 ಅಂತರದಿಂದ ಸೋಲಿಸಿತು. ಇದಕ್ಕೆ ಅದೇ ಪ್ರದರ್ಶನವನ್ನು ಮುಂದುವರೆಸುವ ಗುರಿಯೊಂದಿಗೆ ಸೂರ್ಯಕುಮಾರ್ ಯಾದವ್ ಪಡೆ ಕಣಕ್ಕಿಳಿಯಲಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft