ಅನಾರೋಗ್ಯ ಮುಚ್ಚಿಟ್ಟು ಮದುವೆ ಮಾಡಿಕೊಟ್ಟಿದ್ದಾರೆ ಎಂಬ ಸೇಡಿಗೆ ಪತ್ನಿಯನ್ನೇ ಕೊಂದ ಘಟನೆಯೂ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿತ್ತು. ಸದ್ಯ ಆ ಪ್ರಕರಣಕ್ಕೆ ದಿನ ಕಳೆದಂತೆ ನಾನಾ ತಿರುವು ಸಿಗುತ್ತಿದೆ. ಮಹೇಂದ್ರ ರೆಡ್ಡಿ ಅನೈತಿಕ ಸಂಬಂಧ ಹೊಂದಿದ್ದ ಹೀಗಾಗಿ ಕೃತಿಕಾ ರೆಡ್ಡಿಯನ್ನು ಕೊಲೆ ಮಾಡಿದ್ದಾನೆ ಎಂದು ಊಹಾಪೋಹಗಳು ಹೆಚ್ಚಾಗಿದ್ದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹೇಂದ್ರ ರೆಡ್ಡಿ ಮೊಬೈಲ್ ರಿಟ್ರೀವ್ ಮಾಡಿದಾಗ ಆತನ ಆಪ್ತ ಗೆಳತಿಗೆ ನಿನಗಾಗಿ ನಾನು ನನ್ನ ಹೆಂಡತಿಯನ್ನು ಕೊಂದಿದ್ದೇನೆ ಎಂಬ ಸಂದೇಶವೂ ಫೋನ್ಪೇನಲ್ಲಿ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ʻನಿಂಗಾಗಿ ನನ್ನ ಹೆಂಡ್ತಿ ಕೊಂದೆʼ; ಆಪ್ತ ಗೆಳತಿಗೆ ಫೋನ್ಪೇನಲ್ಲಿ ಮೆಸೇಜ್ ಮಾಡಿ ತಗ್ಲಾಕೊಂಡ ಮಹೇಂದ್ರ ರೆಡ್ಡಿ




