News

ತೆಲಂಗಾಣ ಸರ್ಕಾರದಿಂದ ಮಹತ್ವದ ನಡೆ ,ಸಂಪುಟದ 16 ನೇ ಸಚಿವರಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪ್ರಮಾಣ ವಚನ ಸ್ವೀಕಾರ

ತೆಲಂಗಾಣ: ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು , ಮುಖ್ಯಮಂತ್ರಿಗಳು ಸೇರಿದಂತೆ ಹಲವು ನಾಯಕರ ಉಪಸ್ಥಿತಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ರವರು ತೆಲಂಗಾಣ ಸರ್ಕಾರದ ಹದಿನಾರನೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಸಮಾರಂಭದಲ್ಲಿ ರಾಜ್ಯಪಾಲರು ಪ್ರಮಾಣ ಬೋಧಿಸಿದರು. ಆದರೆ, ತಮ್ಮ ನೇಮಕವನ್ನು ಉಪಚುನಾವಣೆಗೆ ಜೋಡಿಸಿರುವ ಆರೋಪಗಳನ್ನು ಅಜರುದ್ದೀನ್ ತಳ್ಳಿಹಾಕಿದರು. ಪ್ರಮಾಣವಚನ ಸ್ವೀಕರಿಸಿದ ನಂತರ ಅವರು, “ನಾನು ಸಂತೋಷವಾಗಿದ್ದೇನೆ. ನನ್ನ ಪಕ್ಷದ ಹೈಕಮಾಂಡ್, ಜನತೆ ಮತ್ತು ನನ್ನ ಬೆಂಬಲಿಗರಿಗೆ ಧನ್ಯವಾದ ಹೇಳುತ್ತೇನೆ. ಇದು ಜುಬಿಲಿ ಉಪಚುನಾವಣೆಗೆ ಸಂಬಂಧಿಸಿದ್ದಲ್ಲ. ಇವು ಎರಡು ಪ್ರತ್ಯೇಕ ವಿಷಯಗಳು ಮತ್ತು ಅವುಗಳನ್ನು ಜೋಡಿಸಬಾರದು ” ಎಂದು ಹೇಳಿದರು. “ನನಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೂ, ಜನರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜಿ. ಕಿಶನ್ ರೆಡ್ಡಿ ಏನಾದರೂ ಹೇಳಬಹುದು.

ನನಗೆ ಯಾರಿಂದಲೂ ದೇಶಪ್ರೇಮದ ಪ್ರಮಾಣಪತ್ರದ ಅಗತ್ಯವಿಲ್ಲ, ಯಾವ ಟೀಕೆಗಳಿಗೂ ನಾನು ಕಿವಿಗೊಡುವುದೂ ಇಲ್ಲ “ಎಂದು ಅಜರುದ್ದೀನ್ ಸ್ಪಷ್ಟಪಡಿಸಿದರು. ಇತ್ತ ಅಜರುದ್ದೀನ್ ಅವರ ನೇಮಕವು ಬಿಜೆಪಿ ತೀವ್ರ ಟೀಕೆಗೆ ಗುರಿಯಾಯಿತು. ಬಿಜೆಪಿ ಇದನ್ನು ಉಪಚುನಾವಣೆಯ ಮುನ್ನ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ “ರಾಜಕೀಯ ಓಲೈಕೆ” ಎಂದು ಕರೆದಿದೆ. ಅಜರುದ್ದೀನ್ ಅವರ ಸೇರ್ಪಡೆಯು ಅರ್ಹತೆ ಆಧಾರಿತ ಆಡಳಿತಕ್ಕಿಂತ ಚುನಾವಣಾ ಲಾಭಕ್ಕಾಗಿ ನೀಡಿದ ಬಹುಮಾನ ಎಂದು ಬಿಜೆಪಿ ಬಣ್ಣಿಸಿದೆ.

ಪ್ರಸ್ತುತ ಟೀಕೆಗಳನ್ನು ತಳ್ಳಿಕೊಂಡು ಅಜರುದ್ದೀನ್ ಅವರು ತಮ್ಮ ನೇಮಕವನ್ನು ರಾಜಕೀಯಕ್ಕಿಂತ ಪಕ್ಷದ ಮೇಲಿನ ನಂಬಿಕೆ ಮತ್ತು ಸೇವಾ ಮನೋಭಾವದೊಂದಿಗೆ ಜೋಡಿಸಿದ್ದಾರೆ. ಅವರ ಅನುಭವ ಮತ್ತು ಕ್ರಿಕೆಟ್ ಲೋಕದಲ್ಲಿನ ಜನಪ್ರಿಯತೆ, ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಸಹಾಯ ಮಾಡಬಹುದೆಂದು ಪಕ್ಷದ ನಾಯಕರು ಆಶಿಸಿದ್ದಾರೆ. . ತಮ್ಮ ನೇಮಕವನ್ನು ರಾಜಕೀಯಕ್ಕಿಂತ ಪಕ್ಷದ ಮೇಲಿನ ನಂಬಿಕೆ ಮತ್ತು ಸೇವಾ ಮನೋಭಾವದೊಂದಿಗೆ ಜೋಡಿಸಿದ್ದಾರೆ. ಅವರ ಅನುಭವ ಮತ್ತು ಕ್ರಿಕೆಟ್ ಲೋಕದಲ್ಲಿನ ಜನಪ್ರಿಯತೆ, ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಸಹಾಯ ಮಾಡಬಹುದೆಂದು ಪಕ್ಷದ ನಾಯಕರು ಆಶಿಸಿದ್ದಾರೆ. 

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft