
ಯಾವುದೇ ಕಾಯಿಲೆ ಬರದಂತೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಈ 10 ನಿಯಮಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು.ಕಲರ್ ಫುಲ್ ಆಹಾರದಿಂದ ನಮ್ಮ ಪ್ಲೇಟ್ ಕೇವಲ ಸುಂದರವಾಗಿ ಮಾತ್ರ ಕಾಣುವುದಲ್ಲದೆ, ಪೋಷಕಾಂಶಗಳಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಕೆಂಪು ಆಹಾರಗಳು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತವೆ. ಆದರೆ ನೀಲಿ ಮತ್ತು ನೇರಳೆ ಆಹಾರಗಳು ನಮ್ಮ ಜ್ಞಾಪಕ ಶಕ್ತಿ ಹೆಚ್ಚಿಸುತ್ತವೆ.
ನೀರು ನಮಗೆಲ್ಲರಿಗೂ ಎಷ್ಟು ಅವಶ್ಯಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ವೈದ್ಯರು ಕೂಡ ಯಾವುದೇ ಕಾಯಿಲೆಗಳು ಬರಲಿ, ಹೆಚ್ಚು ನೀರು ಕುಡಿಯಿರಿ ಎಂದು ಹೇಳುವುದುನ್ನು ಮರೆಯುವುದಿಲ್ಲ. ದೇಹದ ಪ್ರತಿಯೊಂದು ಜೀವಕೋಶ ಕಾರ್ಯನಿರ್ವಹಿಸಲು ನೀರು ಬೇಕಾಗುತ್ತದೆ. ನೀವು ಆರೋಗ್ಯವಾಗಿರಬೇಕೆಂದರೆ ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಆದ್ದರಿಂದ ದಿನನಿತ್ಯ 12-14 ಗ್ಲಾಸ್ ನೀರು ಕುಡಿಯಿರಿ.
ದೇಶದಲ್ಲಿ ಹೆಚ್ಚಿನ ಜನರು ವಿಟಮಿನ್-ಡಿ ಕೊರತೆಯಿಂದ ಬಳಲುತ್ತಿದ್ದಾರೆ. ವಿಟಮಿನ್ ಡಿ ಕೊರತೆಯಾದರೆ ಆಯಾಸ, ಸ್ನಾಯು ದೌರ್ಬಲ್ಯ ಅಥವಾ ಇತರ ಆರೋಗ್ಯ ಸಮಸ್ಯೆಗಳು ಬರುತ್ತವೆ. ವಿಟಮಿನ್ ಡಿ ಯ ನೈಸರ್ಗಿಕ ಮೂಲ ಸೂರ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಆದ್ದರಿಂದ ಬೆಳಗ್ಗೆ 6 ರಿಂದ 8 ಗಂಟೆ ಅಥವಾ ಸಂಜೆ 4 ರಿಂದ 6 ಗಂಟೆಯವರೆಗೆ ಸೂರ್ಯನ ಬೆಳಕಿನಲ್ಲಿ ಓಡಾಡಿ.
ಪೌಷ್ಠಿಕ ಆಹಾರ ಸೇವಿಸದರಷ್ಟೇ ಸಾಲದು, ದೈಹಿಕ ಚಟುವಟಿಕೆಯೂ ಬಹಳ ಮುಖ್ಯ. ಆದ್ದರಿಂದ ಸದಾ ದೈಹಿಕವಾಗಿ ಸಕ್ರಿಯವಾಗಿರಿ. ಫಿಟ್ ನೆಸ್ ವಿಚಾರಕ್ಕೆ ಬಂದಾಗ ನಡಿಗೆ ಕೂಡ ಅನೇಕ ಕಾಯಿಲೆಗಳನ್ನು ಹೊಡೆದೋಡಿಸುವುದಲ್ಲದೆ, ಫಿಟ್ ಆಗಿರಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಆದ್ದರಿಂದ ನೀವು ದಿನನಿತ್ಯ ಎಷ್ಟು ನಡೆಯುತ್ತೀರಿ ಎಂದು ತಿಳಿದುಕೊಳ್ಳಲು ನಿಮ್ಮ ಮೊಬೈಲ್ ಅಪ್ಲಿಕೇಶನ್ ಬಳಸಿ. ಇದು ನಿಮ್ಮ ನಡಿಗೆಯನ್ನು ರೆಕಾರ್ಡ್ ಮಾಡುತ್ತದೆ. ನಂತರ 10,000 ಹೆಜ್ಜೆ ನಡೆಯಿರಿ ಅಥವಾ ಅದಕ್ಕಿಂತ ಹೆಚ್ಚು ನಡೆಯಲು ಪ್ರಯತ್ನಿಸಬಹುದು.
ಒತ್ತಡಕ್ಕೆ ಔಷಧಿ ಇಲ್ಲ. ನಾವು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಒತ್ತಡ ಕಡಿಮೆ ಮಾಡಬಹುದು. ಹಾಗೆಯೇ ಒತ್ತಡವನ್ನು ಕಡಿಮೆ ಮಾಡಲು ಧ್ಯಾನವು ಉತ್ತಮ ಮದ್ದಾಗಿದೆ. ವಿಶೇಷವಾಗಿ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು 15 ನಿಮಿಷಗಳ ಕಾಲ ಧ್ಯಾನ ಮಾಡುವುದು ಬಹಳ ಮುಖ್ಯ.
ಕಾರ್ಡಿಯೋ ವ್ಯಾಯಾಮ ಮಾಡಲು ಬಹಳ ಮಜವಾಗಿರುತ್ತದೆ. ಇದರಿಂದ ನಮ್ಮ ಹೃದಯದ ಆರೋಗ್ಯ ಅದ್ಭುತವಾಗಿರುತ್ತದೆ. ವಾರದಲ್ಲಿ ಕನಿಷ್ಠ ಐದು ದಿನಗಳಾದರೂ ನೃತ್ಯ, ಯೋಗ, ಸೈಕ್ಲಿಂಗ್ ಅಥವಾ ಓಟದಲ್ಲಿ ಭಾಗಿಯಾಗಿ.



